ಭಟ್ಕಳ ಸಮುದ್ರದಲ್ಲಿ ಮುಳುಗಿದ ಬೋಟ್ ಮೀನುಗಾರರ ರಕ್ಷಣೆ

ಸುದ್ದಿ: ಉತ್ತರ ಕನ್ನಡ ಪ್ರತಿನಿಧಿ

ಕಾರವಾರ: ಭಾರೀ ಗಾಳಿ ಮಳೆಗೆ ಭಟ್ಕಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ಓಂ ಶಕ್ತಿ ಹೆಸರಿನ ಬೋಟ್ ಮುಳುಗಿದೆ.

ಬೋಟ್ ನಲ್ಲಿದ್ದ ನಾಲ್ವರು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.

ಪಕ್ಕದ ಬೋಟ್ ನವರು ಮೀನುಗಾರರನ್ನು ರಕ್ಷಿಸಿದ್ದಾರೆ. ಲಕ್ಷಾಂತರ ರೂ.ಬಲೆ,‌ಮೀನು ಸಮುದ್ರ ಪಾಲಾಗಿವೆ.

ಮಹಾದೇವ ಖಾರ್ವಿ ಅವರಿಗೆ ಸೇರಿದ ಬೋಟ್ ಅದು ಎಂದು ತಿಳಿದು ಬಂದಿದೆ. ಅಚಾನಕ್ ಸುರಿದ ಮಳೆ ಗಾಳಿಗೆ ಸಮುದ್ರದಲ್ಲಿ ಅಲೆಗಳೆದ್ದು ಬೋಟ್ ಸಂಕಷ್ಟಕ್ಕೆ ಸಿಲುಕಿತು. ಆದರೆ ಪಕ್ಕದ ಬೋಟ್ ಹತ್ತಿರ ಇದ್ದ ಕಾರಣ ನಾಲ್ವರು ಬೋಟ್ ಕಾರ್ಮಿಕರ ಜೀವ ಉಳಿದಿದೆ.
….

Latest Indian news

Popular Stories