ಗ್ಯಾರಂಟಿಗಳಿಗಾಗಿ ನಾವು ಕೇಂದ್ರದಿಂದ ನಯಾ ಪೈಸೆ ಹಣ ಕೇಳಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಗ್ಯಾರಂಟಿಗಳಿಗಾಗಿ ನಾವು ಕೇಂದ್ರದಿಂದ ನಯಾ ಪೈಸೆ ಹಣ ಕೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿ ಬಳಿಕ ಮಾತನಾಡಿದ ಅವರು, ನಿರ್ಮಲಾ ಸೀತಾರಾಮನ್ ಗ್ಯಾರಂಟಿಗೆ ಹಣ ಕೇಳುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ.

ಗ್ಯಾರಂಟಿಗಳಿಗಾಗಿ ನಾವು ಕೇಂದ್ರದಿಂದ ನಯಾ ಪೈಸೆ ಹಣ ಕೇಳಿಲ್ಲ. ನಮಗೆ ಅದರ ಅಗತ್ಯವೂ ಇಲ್ಲ.

48,000 ಹೆಕ್ಟೇರ್ ಬೆಳೆ ಹಾನಿಯಾಗಿದೆ. ರೈತರಿಗೆ ಮೊದಲ ಕಂತಾಗಿ ನಾವೇ ಹಣ ನೀಡುತ್ತಿದ್ದೇವೆ. 34 ಲಕ್ಷ ರೈತರಿಗೆ ತಲಾ 2000 ರೂ. ಪರಿಹಾರ ನೀಡಿದ್ದೇವೆ. ಬರ ಪರಿಹಾರವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ ಎಂದರು. ಇನ್ನೂ ಮೋದಿ, ಅಮಿತ್ ಶಾ ಅವರೇ ಯಾವ ಮುಖ ಹಿಡಿದು ಕರ್ನಾಟಕಕ್ಕೆ ಬರುತ್ತೀರಿ. ಕೇಂದ್ರ ಸರ್ಕಾರ ಮಲತಾಯಿ ದೋರಣೆ ಮಾಡಿದೆ. ಮೋದಿ ಹಾಗೂ ಅಮಿತ್ ಶಾ ಕರ್ನಾಟಕವನ್ನು ದ್ವೇಷಿಸುತ್ತಿದ್ದಾರೆ. ರಾಜ್ಯದ ರೈತರನ್ನು ದ್ವೇಷಿಸುತ್ತಿದ್ದಾರೆ. 223 ತಾಲೂಕು ಬರಗಾಲ ಪೀಡಿತವಾಗಿದೆ. ಮೆಮೊರಾಡಂ ಕೊಟ್ಟರೂ ಅಮಿತ್ ಶಾ ವಿಳಂಬವಾಗಿ ಕೊಟ್ಟರು ಎಂದು ಸುಳ್ಳು ಹೇಳಿದರು ಎಂದು ಕಿಡಿ ಕಾರಿದರು.

18,172 ಕೋಟಿ ರೂ. ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಮನವಿ ಕೊಟ್ಟು ಏಳು ತಿಂಗಳು ಆಗಿದೆ. ನಾನೇ ಸ್ವತಃ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದೇನೆ. ಅಮಿತ್ ಶಾ ಡಿ.23ಕ್ಕೆ ಸಭೆ ಕರದಿದ್ದೇವೆ ಎಂದು ಹೇಳಿದ್ದರು. ಆದರೆ, ಇವತ್ತಿನವರೆಗೆ ಯಾವುದೇ ಸಭೆ ಮಾಡಿಲ್ಲ.‌ ಭದ್ರಾ ಯೋಜನೆಗೆ 5,300 ಕೋಟಿ ರೂ. ಕೊಡುವುದಾಗಿ ಹೇಳಿದ್ದಾರೆ. ಅದೂ ಇನ್ನೂ ಬಿಡುಗಡೆ ಆಗಿಲ್ಲ. ಹಣಕಾಸು ಆಯೋಗದಂತೆ ವಿಶೇಷ ಅನುದಾನವನ್ನೂ ಕೊಟ್ಟಿಲ್ಲ. ಫೆರಿಪರೆಲ್ ರಿಂಗ್ ರಸ್ತೆಗೆ 3000 ಕೋಟಿ ರೂ. ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು

Latest Indian news

Popular Stories