ಹರಿಯಾಣದ ಮೇವಾತ್ ಜಿಲ್ಲೆಯ ಜಿಮ್ ತರಬೇತುದಾರ ಆಸಿಫ್ ಖಾನ್ ಎಂಬ ವ್ಯಕ್ತಿಯನ್ನು ‘ಜೈ ಶ್ರೀ ರಾಮ್’ ಹೇಳಲು ಒತ್ತಾಯಿಸಿ ಹಿಂದೂ ಜಾಗರಣ ಸಂಘಟನೆಯ ಕಾರ್ಯಕರ್ತರು ಭಾನುವಾರ ಹತ್ಯೆಗೈದಿದ್ದಾರೆ. #JusticeForAsif
ಘಟನೆ ನಡೆದ ದಿನ ಆಸಿಫ್ ಖಾನ್ ತನ್ನ ಸ್ನೇಹಿತರೊಂದಿಗೆ ಹರ್ಯಾಣದ ಸೊಹ್ನದ ಕಡೆಗೆ ಔಷಧಿ ತರಲು ಹೋಗುತ್ತಿದ್ದ ಸಂದರ್ಭದಲ್ಲಿ ೧೫ ಜನರ ಕಾರನ್ನು ಅಡ್ಡಗಟ್ಟಿ ”ಮುಲ್ಲಾನನ್ನು ಕೊಲ್ಲು” ಎಂದು ಕಿರುಚುತ್ತಾ ದಾಳಿ ಮಾಡಿದೆ ಎಂದು ಇಂಗ್ಲಿಷ್ ಮಾಧ್ಯಮ ಮಕ್ತೂಬ್ ವರದಿ ಮಾಡಿದೆ.
ಹರಿಯಾಣ ಪೊಲೀಸರು ಐಪಿಸಿ 302 ರ ಅಡಿಯಲ್ಲಿ ದುಷ್ಕರ್ಮಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಇದುವರೆಗೂ ಯಾವುದೇ ಬಂಧನವಾಗಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.
ಆಸಿಫ್ ಜೊತೆ ಪ್ರಯಾಣಿಸುತ್ತಿದ್ದ ರಶೀದ್ (31) ಮತ್ತು ವಾಸಿಫ್ (22), ಮೇಲೆ ಕೂಡಾ ಹಲ್ಲೆ ನಡೆದಿದೆ, ದಾಳಿಯಿಂದ ತಪ್ಪಿಸಿಕೊಂಡರು. ರಶೀದ್ ಗೆ ಗಂಭೀರ ಪರಿಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಯ ಬಗ್ಗೆ ಸಂಸದ ಅಸಾದುದ್ದೀನ್ ಓವೈಸಿ ಖಂಡಿಸಿ, ಹತ್ಯೆಕೋರರನ್ನು ಬಂಧಿಸಲು ಹರ್ಯಾಣ ಸಿ ಎಂ ಖಟ್ಟರ್ ನನ್ನು ಆಗ್ರಹಿಸಿದ್ದಾರೆ.