ತೆಲಂಗಾಣ:ದಕ್ಷಿಣ ಭಾರತದ ತೆಲಂಗಾಣದಲ್ಲಿ ಚುನಾವಣೆ ಬಿಸಿ ಜೋರಾಗಿದೆ. ಕಳೆದ 2 ಚುನಾವಣೆಯಲ್ಲಿ ಸುಲಭ ಜಯ ಸಾಧಿಸಿದ್ದ ಬಿಆರ್ಎಸ್ ಪಕ್ಷ ಈ ಬಾರಿ ಭಾರೀ ಪೈಪೋಟಿ ಎದುರಿಸಬೇಕಾಗಿದೆ.
ಏಕೆಂದರೆ ಉಚಿತ ಯೋಜನೆ ಘೋಷಿಸಿ ಕರ್ನಾಟಕದಲ್ಲಿ ಕಾಂಗ್ರೆಸ್ ಕರ್ನಾಟಕ ಅಧಿಕಾರಕ್ಕೆ ಬಂದಿದೆ.
ಇದೇ ಅಸ್ತ್ರವನ್ನು ಬಳಸಿಕೊಂಡು ಹಳೆಯ ಪಕ್ಷ ತೆಲಂಗಾಣದಲ್ಲಿ ಅಧಿಕಾರ ಹಿಡಿಯುವ ಆಲೋಚನೆಯಲ್ಲಿದೆ.ಆದರೆ ಕಾಂಗ್ರೆಸ್ ಪಕ್ಷಕ್ಕೆ ಟಕ್ಕರ್ ಕೊಡಲು ಕೆಸಿಆರ್ ಭರ್ಜರಿ ಘೋಷಣೆ ಮಾಡಿದೆ. ಬಿಆರ್ಎಸ್ ಪಕ್ಷ ಕೇವಲ 400 ರೂ.ಗೆ ಸಿಲಿಂಡರ್ ನೀಡುತ್ತೇವೆಂದು ಘೋಷಣೆ ಮಾಡಿದೆ.
5 ಸಾವಿರದವರೆಗೆ ಪಿಂಚಣಿ ಮೊತ್ತವನ್ನು ಹೆಚ್ಚಿಸಲಾಗುವುದು.ವಾರ್ಷಿಕವಾಗಿ 500 ರೂ.ಗಳಂತೆ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ. ಪ್ರಸ್ತುತ 3016ರೂಪಾಯಿ ನೀಡಲಾಗುತ್ತಿದೆ. ಇದು ಮುಂದಿನ 5 ವರ್ಷದವರೆಗೆ 5000ಕ್ಕೆ ಏರಿಕೆಯಾಗಲಿದೆ.