ಪಡುಬಿದ್ರಿ: ಉಚ್ಚಿಲ ಮತ್ತು ಎಲ್ಲೂರು ಗ್ರಾಮದ ಮನೆಗಳಲ್ಲಿ ಕಳ್ಳತನ ನಡೆದಿರುವ ಕುರಿತು ಪ್ರಕರಣ ದಾಖಲಾಗಿದೆ.
ವಿದೇಶದಲ್ಲಿರುವ ಉಚ್ವಿಲದ ಮೊಹಮ್ಮದ್ ಇಬ್ರಾಹೀಮ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿರುವುದು ಜನವರಿ 10 ಕ್ಕೆ ಗಮನಕ್ಕೆ ಬಂದಿದ್ದು ಮನೆಯ ಮುಂದಿನ ಬಾಗಿಲನ್ನು ಯಾರೋ ಕಳ್ಳರೂ ಯಾವುದೋ ವಸ್ತುವಿನಿಂದ ಬಲವಂತವಾಗಿ ಮೀಟಿ ತೆರೆದು ಒಳ ಪ್ರವೇಶಿಸಿ, ಮನೆಯಲ್ಲಿದ್ದ ಎಲ್ಲಾ ಕೋಣೆಗಳಲ್ಲಿದ್ದ ಕಪಾಟಿನ ಬಾಗಿಲಗಳನ್ನು ತೆರೆದು ಅದರೊಳಗಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಮತ್ತು ಸಿಸಿಕ್ಯಾಮೆರಾದ ಡಿ.ವಿ.ಆರ್ ಮತ್ತು ಅಡುಗೆ ಕೋಣೆಯಲ್ಲಿದ್ದ ಮಿಕ್ಸಿಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಎಲ್ಲೂರು ಗ್ರಾಮದ ಪ್ರಭಾಕರ ಎಂಬುವವರ ಮನೆಯ ಮುಂಭಾಗದ ಬೀಗವನ್ನು ಒಡೆದು ಮನೆಗೆ ಪ್ರವೇಶಿಸಿ 100 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಸಂಬಂಧ ಪಡುಬಿದ್ರಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.