ಮಿಂಚಿನ ಅಬಕಾರಿ ದಾಳಿ ಕೈಗೊಂಡು ೧,೫೦,೦೦೦ ಮೌಲ್ಯದ ಸ್ವದೇಶಿ ಮದ್ಯ ಬೀರ ಹಾಗೂ ೪ ದ್ವಿ ಚಕ್ರ ವಾಹನಗಳು ಜಪ್ತಿ.

ಮಾನ್ಯ ಶ್ರೀ ಎಸ್.ಕೆ. ಕುಮಾರ ಮಾನ್ಯ ಅಬಕಾರಿ ಅಪರ ಆಯುಕ್ತರು (ಅಪರಾಧ) ಕೆಂದ್ರಸ್ಥಾನ ಬೆಳಗಾಂವ ಹಾಗೂ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಕಲಬುರಗಿ ವಿಭಾಗ ಹಾಗೂ ಮಾನ್ಯ ಶ್ರೀಮತಿ ಶಶಿಕಲಾ ಎಸ್.ಒಡೆಯರ್ ಅಬಕಾರಿ ಉಪ ಆಯುಕ್ತರು ಕಲಬುರಗಿ ಜಿಲ್ಲೆ ಇವರ ಆದೇಶದನ್ವಯ ಮತ್ತು ಶ್ರೀ ಮಹ್ಮದ ಇಸ್ಮಾಯಿಲ ಇನಾಮದಾರ ಅಬಕಾರಿ ಉಪ ಅಧೀಕ್ಷಕರ ರವರ ನೇತೃತ್ವದಲ್ಲಿ ೨೦೨೦ ಕೋವಿಡ-೧೯ ವೈರಾಣು ೨ ನೇ ಅಲೆ ಹರಡುವಿಕೆಯನ್ನು ತಡೆಗಟ್ಟಿ ನಿಯಂತ್ರಿಸುವ ಹಿನ್ನಲೆಯಲ್ಲಿ ಸನ್ನದು ಮದ್ಯ ವಹಿವಾಟು ಸಮಯ ನಿಗದಿಪಡಿಸಿ ಆದೇಶಿಸಿದ ಪ್ರಯುಕ್ತ ಈಗಾಗಲೇ ಜಿಲ್ಲೆಯ ಎಲ್ಲಾ ಮದ್ಯದ ಸನ್ನದುದಾರರಿಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡಬಾರದೆಂದು ಎಲ್ಲಾ ಸನ್ನದುದಾರರ ಸಭೆ ಕರೆದು ತಿಳಿಸಿ ಹೇಳಲಾಗಿತ್ತು,
ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಕಲಬುರಗಿ ರವರು ಸಿಬ್ಬಂಧಿಯವರೊAದಿಗೆ ದಿನಾಂಕ: ೩೦-೦೪-೨೦೨೧ ರಂದು. ಕಲಬುರಗಿ ಹುಮನಾಬಾದ ರಸ್ತೆಯ ಉಪಳಾಂವ ಕ್ರಾಸ ಹತ್ತಿರ ರಸ್ತೆಕಾವಲು ಮಾಡುತ್ತಿರುವಾಗ ಅಕ್ರಮವಾಗಿ ಮದ್ಯ ಸಾಗಾಣ ಕೆಗೆ ಬಳಸಿದ ಒಂದು ದ್ವಿಚಕ್ರ ವಾಹನ ಸಂ: ಕೆಎ-೩೨/ಇನ್-೬೫೯೭ ಎಕ್ಟೀವಾ-೧೨ ಹಾಗೂ ೧೭.೨೮೦ ಲೀಟರ ಮದ್ಯವನ್ನು ಜಪ್ತಿ ಮಾಡಿಕೊಂಡು ಶ್ರೀ ಮಹ್ಮದ ಇಸ್ಮಾಯಿಲ ಇನಾಮದಾರ ಅಬಕಾರಿ ಉಪ ಅಧೀಕ್ಷಕರು ಒಂದು ಘೋರ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ನಗರದ ಸ್ಟೇಷನ ಏರಿಯಾದಲ್ಲಿ ಗಸ್ತು ಮಾಡುತ್ತಿರುವಾಗ ಅಕ್ರಮವಾಗಿ ೧೭.೨೮೦ ಲೀಟರ ಮದ್ಯವನ್ನು ಹೊಂದಿ ಸಾಗಾಣ ಕೆ ಮಾಡುತ್ತಿರುವ ವಾಹನ ಸಂಖ್ಯೆ: ಕೆಎ-೩೨/ಇಅರ್-೦೧೬೨ ಹೊಂಡಾ ಬಿ ಶೈನ್ ದ್ವಿ ಚಕ್ರ ವಾಹನವನ್ನು ಜಪ್ತಿ ಮಾಡಿಕೊಂಡು ಶ್ರೀ ಸಂತೋಷಕುಮಾರ ಅಬಕಾರಿ ಉಪ ನಿರೀಕ್ಷಕರು ಘೋರ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
೩. ಅಬಕಾರಿ ನಿರೀಕ್ಷಕರು ವಲಯ ನಂ:೧ ಕಲಬುರಗಿ ರವರು ಸಿಬ್ಬಂಧಿಯವರೊAದಿಗೆ ದಿನಾಂಕ: ೩೦-೦೪-೨೦೨೧ ರಂದು ಕಲಬುರಗಿ ನಗರದ ನೆಹರು ಗಂಜ ಏರಿಯಾದಲ್ಲಿ ಗಸ್ತು ಕಾರ್ಯಚರಣೆ, ಮಾಡುತ್ತಿರುವಾಗ ಅಕ್ರಮವಾಗಿ ಸಾಗಾಣ ಕೆಗೆ ಬಳಸಿದ್ದ ೨ ದ್ವಿಚಕ್ರ ವಾಹನಗಳನ್ನು ಹಾಗೂ ೨೧.೬೦೦ ಲೀಟರ ಮದ್ಯವನ್ನು ಜಪ್ತಿ ಮಾಡಿಕೊಂಡು ಅಬಕಾರಿ ಉಪ ನಿರೀಕ್ಷಕರಾದ ಶ್ರೀ ಪ್ರವೀಣಕುಮಾರ. ಹಾಗೂ ಶ್ರೀ ಬಸವರಾಜ ಉಳ್ಳೆಸೂಗೂರು ವಲಯ ನಂ:೧ ಕಲಬುರಗಿ ತಲಾ ಒಂದೊAದು ಘೋರ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
೪. ಅಬಕಾರಿ ನಿರೀಕ್ಷಕರು ವಲಯ ನಂ:೨ ಕಲಬುರಗಿ ರವರು ಸಿಬ್ಬಂಧಿಯವರೊAದಿಗೆ ದಿನಾಂಕ: ೩೦-೦೪-೨೦೨೧ ರಂದು ಕಲಬುರಗಿ ತಾಲೂಕಿನ ನಂದಿಕೂರ ಗ್ರಾಮದಲ್ಲಿ ಗಸ್ತು ಕಾರ್ಯಚರಣೆ ಮಾಡುತ್ತಿದ್ದಾಗ, ಅಕ್ರಮವಾಗಿ ೨೦.೬೧೦ ಲೀಟರ ಮದ್ಯವನ್ನು ಜಪ್ತಿ ಮಾಡಿಕೊಂಡು ಅಬಕಾರಿ ನಿರೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಡಿ.. ಹಾಗೂ ಶ್ರೀ ನರೆಂದ್ರಕುಮಾರ ಅಬಕಾರಿ ಉಪ ನಿರೀಕ್ಷಕರು ತಲಾ ಒಂದೊAದು ಘೋರ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸದರಿ ಗಸ್ತು ಕಾರ್ಯಚರಣೆ ಅಬಕಾರಿ ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಕಲಬುರಗಿ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ಶ್ರೀ ವಿಠಲರಾವ ಎಂ. ವಾಲಿ ಉಪ ವಿಬಾಗ ಕಲಬುರಗಿ ಹಾಗೂ ಶ್ರೀ ಮಲ್ಲಿಕಾರ್ಜುನ ಡಿ. ವಲಯ ನಂ:೨ ಮತ್ತು ಶ್ರೀ ಬಾಲಕೃಷ್ಣ ಮುದಕಣ್ಣ ವಲಯ ನಂ:೧ ಕಲಬುರಗಿ ಅಬಕಾರಿ ಉಪ ನಿರೀಕ್ಷಕರಾದ ಶ್ರೀ ಸಂತೋಷ ಕುಮಾರ, ನರೇಂದ್ರ ಕುಮಾರ, ಶ್ರೀ ಪ್ರವೀಣಕುಮಾರ, ಶ್ರೀ ಬಸವರಾಜ ಉಳ್ಳೆಸೂಗೂರು ಹಾಗೂ ಅಬಕಾರಿ ಮುಖ್ಯ ಪೇದೆಗಳಾದ ಶ್ರೀ ಬಸವರಾಜ ಎಂ., ಶ್ರೀ ಸಿದ್ದಮಲ್ಲಪ್ಪ ಅಬಕಾರಿ ಪೇದೆಗಳಾದ ಶ್ರೀ ರವಿಕುಮಾರ.

Latest Indian news

Popular Stories