ಮಂಗಳೂರು| ಬಿಸಿಲಿನ ಬೇಗೆಗೆ ಒಡೆದ ಬಸ್ಸಿನ ಗಾಜು: ಚಾಲಕ ಸಹಿತ ಮೂವರಿಗೆ ಗಾಯ

ಮಂಗಳೂರು: ಬಿಸಿಲಿನ ಬೇಗೆಗೆ ಚಲಿಸುತ್ತಿದ್ದ ಬಸ್ಸಿನ ಮುಂಭಾಗದ ಗಾಜು ಒಡೆದು ಚಾಲಕ ಸಹಿತ ಮೂವರು ಗಾಯಗೊಂಡ ಘಟನೆ ವಿಟ್ಲದ ಉರಿಮಜಲು ಎಂಬಲ್ಲಿ ನಡೆದಿದೆ.

ಪುತ್ತೂರಿನಿಂದ ವಿಟ್ಲ ಮೂಲಕ ಕಾಸರಗೋಡಿಗೆ ತೆರಳುತ್ತಿದ್ದ ಕೇರಳ ರಾಜ್ಯ ಸಾರಿಗೆ ನಿಗಮದ (KSRTC) ಬಸ್‌ನ ಮುಂಭಾಗದ ಗಾಜು ಸಂಚರಿಸುತ್ತಿರುವಾಗಲೇ ಒಡೆದಿದೆ. ಇದರಿಂದಾಗಿ ಬಸ್ಸಿನ ಮುಂಭಾಗ ಕುಳಿತಿದ್ದ ಬಾಲಕನಿಗೆ ಗಂಭೀರ ಗಾಯಗಳಾಗಿವೆ ಎಂದು ಹೇಳಲಾಗುತ್ತದೆ. ಜೊತೆಗೆ ಬಸ್ಸಿನ ಚಾಲಕ ಮತ್ತು ಮತ್ತೋರ್ವ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಬಿಸಿಲಿನ ಬೇಗೆಗೆ ಬಸ್ಸಿನ ಗಾಜು ಒಡೆದಿರಬಹುದೆಂದು ಶಂಕಿಸಲಾಗಿದೆ.

Latest Indian news

Popular Stories