ಅಖಿಲೇಶ್ ಪರ ಪ್ರಚಾರ ನಡೆಸಲಿದ್ದಾರೆ ಮಮತಾ ಬ್ಯಾನರ್ಜಿ!

ಉ.ಪ್ರ: ಈ ಬಾರಿಯ ಉತ್ತರ ಪ್ರದೇಶ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಪರ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪ್ರಚಾರ ನಡೆಸಲಿದ್ದಾರೆ. ರಾಜ್ಯದಲ್ಲಿ ಟಿ.ಎಮ್.ಸಿ ಸ್ಪರ್ಧಿಸುವುದಿಲ್ಲವೆಂದು ಸಮಾಜವಾದಿ ಪಕ್ಷದ ಉಪಾಧ್ಯಕ್ಷ ಕಿರಣ್ಮಯ್ ನಂದ ತಿಳಿಸಿದ್ದಾರೆ.

ಕಿರಣ್ಮಯ್ ನಂದ ಅವರು ಮಮತಾ ಬ್ಯಾನರ್ಜಿಯವರೊಂದಿಗಿನ ಸುದೀರ್ಘ ಮಾತುಕತೆಯ ನಂತರ ಇದೀಗ ಉತ್ತರ ಪ್ರದೇಶಕ್ಕೆ ಹಿಂತಿರುಗಿ ಈ ವಿಚಾರವನ್ನು ಪ್ರಸ್ತುತ ಪಡಿಸಿದ್ದಾರೆ. ಮಮತಾ ಬ್ಯಾನರ್ಜಿಯವರು ಅಖಿಲೇಶ್ ಯಾದವ್ ಅವರೊಂದಿಗೆ ಸೇರಿ ವಾರಣಾಸಿ ಮತ್ತು ಲಕ್ನೊದಲ್ಲಿ ವರ್ಚುವಲ್ ರ಼್ಯಾಲಿ ನಡೆಸಲಿದ್ದಾರೆಂದು ತಿಳಿಸಿದ್ದಾರೆ.

ಅಖಿಲೇಶ್ ಯಾದವ್ ಮತ್ತು ಮಮತಾ ಬ್ಯಾನರ್ಜಿಯವರು ರಾಜಕೀಯವಾಗಿ ಪ್ರಬಲ ಸಂಬಂಧ ಹೊಂದಿದ್ದು, ಮಮತಾ ಬ್ಯಾನರ್ಜಿಯವರು ಕಳೆದ ಬಾರಿ ಆಯೋಜಿಸಿದ್ದ ವಿರೋಧ ಪಕ್ಷಗಳ ಸಭೆಯಲ್ಲೂ ಅಖಿಲೇಶ್ ಪಾಲ್ಗೊಂಡಿದ್ದರು.

Latest Indian news

Popular Stories