ಉತ್ತರ ಪ್ರದೇಶ: ಇಂದು ಆರನೇ ಹಂತದ ಮತದಾನ ಚಾಲ್ತಿಯಲ್ಲಿದ್ದು ಯೋಗಿ ಆದಿತ್ಯನಾಥ್ ಅವರು ಮತ ಚಲಾಯಿಸಿದರು.
ಮತ ಚಲಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಯೋಗಿ, ಉತ್ತರ ಪ್ರದೇಶ ರಾಜ್ಯದಲ್ಲಿ ಬಿಜೆಪಿ 80% ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಂತರ ರಾಜ್ಯದ ಭದ್ರತೆ ಮತ್ತು ಅಭಿವೃದ್ಧಿ ಪರವಾಗಿ ಮತ ಹಾಕಿ ಎಂದು ಮತದಾರರನ್ನು ವಿನಂತಿಸಿದರು.ಉತ್ತರ ಪ್ರದೇಶದ ಅಭಿವೃದ್ಧಿಯನ್ನು ಕಳೆದ ಐದು ವರ್ಷದಲ್ಲಿ ನೀವು ಗಮನಿಸಿದ್ದೀರಿ. ಇದೀಗ ಭಯೋತ್ಪಾದನೆಯ ಪರವಾಗಿರುವ ಮತ್ತು ನಮ್ಮನ್ನು ಆಯ್ಕೆ ಮಾಡುವ ಸಂದರ್ಭ ಎಂದು ಹೇಳಿದರು.
ಏಳನೇ ಹಂತದ ಮತದಾನವು ಮಾರ್ಚ್ 7 ರಂದು ನಡೆಯಲಿದೆ. ಚುನಾವಣಾ ಫಲಿತಾಂಶ ಮಾರ್ಚ್ 10 ಕ್ಕೆ ಹೊರ ಬೀಳಲಿದೆ.