ಸಿಲೆಂಡರ್ ಸ್ಫೋಟ – ಇಬ್ಬರು ಯುವಕರು ಸ್ಥಳದಲ್ಲೇ ಸಾವು

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕ – ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಎಗ್ ರೈಸ್ ಅಂಗಡಿಗೆ ತಗುಲಿದ ಬೆಂಕಿ ಅನಾಹುತದಲ್ಲಿ ಅಲ್ಲಿದ್ದ ಗ್ಯಾಸ್ ಬ್ಲಾಸ್ಟ್ ನಿಂದ ಬೆಂಕಿ ಹತ್ತಿದ್ದನ್ನು ನೋಡಲು ಹೋದ ಇಬ್ಬರಿಗೆ ಗ್ಯಾಸ್ ತುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಸಂಜೆ 4-30ಗಂಟೆಗೆ ತಾಲೂಕಿನ ಸಂಕ್ಲಾಪುರ ಕೊರಚರಹಟ್ಟಿ ಕ್ರಾಸ್ ಬಳಿ ಜರುಗಿದೆ.

ಬೋಸಲರಹಟ್ಟಿಯ ಶ್ರೀಕಾಂತ್ (23)ಹಾಗೂ ಶಿವಣ್ಣ (31) ಗ್ಯಾಸ್ ತುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟ ದುರ್ದೈವಿ ಯುವಕರಾಗಿದ್ದಾರೆ. ಇವರುಗಳು ಸಂಕ್ಲಾಪುರ ಕೊರಚರಹಟ್ಟಿ ಕ್ರಾಸ್ ಬಳಿ ಇರುವ ಬೋರಯ್ಯ ಎಂಬುವರ ಎಗ್ ರೈಸ್ ಶೆಡ್ ಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿ ಉರಿಯುತ್ತಿದ್ದು ಆ ಶೆಡ್ ನಲ್ಲಿಟ್ಟಿದ್ದ ಗ್ಯಾಸ್ ಬ್ಲಾಸ್ಟ್ ಆಗಿದ್ದು ಗ್ಯಾಸ್ ನ ತುಂಡುಗಳು ಬೆಂಕಿ ಹತ್ತಿರುವುದನ್ನು ಅದನ್ನು ನೋಡಲು ಹೋಗಿದ್ದ ಜನರಲ್ಲಿ ಶಿವಣ್ಣ ಎಂಬಾತನಿಗೆ ಗ್ಯಾಸ್ ತುಂಡು ಎಡಗೈ ಕತ್ತರಿಸಿ ಎಡ ಪಕ್ಕೆಯನ್ನು ಹೊಕ್ಕಿದ್ದು ಮತ್ತೋರ್ವ ಶ್ರೀಕಾಂತ್ ಎಂಬಾತನ ಭುಜ ಹಾಗೂ ದೇಹಕ್ಕೆ ಬಲವಾದ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಕಿ ಅನಾಹುತದಿಂದ ಎಗ್ ರೈಸ್ ಶೆಡ್ ಸಂಪೂರ್ಣ ಸುಟ್ಟಿದ್ದು ಆಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿರುವುದು ತಿಳಿದಿದೆ
ಘಟನಾ ಸ್ಥಳಕ್ಕೆ ಕೂಡ್ಲಿಗಿ ತಹಸೀಲ್ದಾರ್ ಜಗದೀಶ್, ಕೂಡ್ಲಿಗಿ ಡಿವೈಎಸ್ ಪಿ ಹರೀಶರೆಡ್ಡಿ, ಗುಡೇಕೋಟೆ ಪಿಎಸ್ಐ ಶಾಂತಮೂರ್ತಿ, ಗುಡೇಕೋಟೆ ಕಂದಾಯ ನಿರೀಕ್ಷಕ ಯಜಮಾನಪ್ಪ, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories