ನವದೆಹಲಿ: ಪತ್ರಕರ್ತೆ ರಾಣಾ ಅಯ್ಯುಬ್ ಅವರ ಇದೀಗ ಟ್ವೀಟೊಂದು ಸದ್ದು ಮಾಡುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರಿತಾದ ಟ್ವೀಟ್ ಇದಾಗಿದ್ದು 2010 ಲಂಚ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ.
ಹಿಂದುಸ್ತಾನ್ ಟೈಮ್ಸ್ ವರದಿಯ ಸ್ಕ್ರಿನ್ ಶಾಟ್ ಹಂಚಿಕೊಂಡಿರುವ ರಾಣಾ ಅಯ್ಯುಬ್, “ಮಾಧವಪುರ ಬ್ಯಾಂಕ್ ಹಗರಣದ ಕುರಿತು 2010 ರ ಹಿಂದೂಸ್ತಾನ್ ಟೈಮ್ಸ್ ವರದಿ. ಟೈಮ್ಸ್ ನೌ ಭ್ರಷ್ಟಾಚಾರದ ಕಿರುಚಾಟ ನನಗೆ ನೆನಪಿದೆ” ಎಂದು ಹೇಳಿದ್ದಾರೆ.
2010 ರ ಮಾಧವಪುರ ಬ್ಯಾಂಕ್ ಹಗರಣದಲ್ಲಿ ಅಮಿತ್ ಶಾ 2.5 ಕೋಟಿ ಲಂಚ ಪಡೆದ ಕುರಿತು ಆರೋಪ ಕೇಳಿ ಬಂದಿತ್ತು. ಇದೀಗ ರಾಣಾ ಅಯ್ಯುಬ್ ಟ್ವೀಟ್ ಮತ್ತೆ ಪ್ರಕರಣವನ್ನು ಮುನ್ನಲೆಗೆ ತಂದಿದೆ.