ಕಲ್ಬುರ್ಗಿ: ನವೆಂಬರ್ 18 ರಂದು ಮಣಿಕಂಠ್ ರಾಥೋಡ್ ಇನ್ನೊವ್ವಾ ಕಾರು ಅಪಘಾತಗೊಂಡಿತ್ತು. ನಂತರ ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರು ಕೊಲೆಗೆ ಯತ್ನ ನಡೆಸಿದ್ದರು ಎಂದು ಆರೋಪ ಮಾಡಿದ್ದ.
ಇದೀಗ ಪೊಲೀಸರು ತನಿಖೆ ನಡೆಸಿ ಅಪಘಾತವನ್ನು ಕೊಲೆಯತ್ನವೆಂದು ಬಿಂಬಿಸಿರುವುದು ಸಾಬೀತಾಗಿದೆ. ಮಣಿಕಂಠ ರಾಥೋಡ್ ಇದೀಗ ಸುದ್ದಿಗೋಷ್ಟಿ ನಡೆಸುವ ಪ್ರಯತ್ನದಲ್ಲಿದ್ದ ಆ ಸಂದರ್ಭದಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.