ರಾಜ್ಯಗಳ ಸಂಬಂಧ ಚೆನ್ನಾಗಿರಬೇಕು: ಕಾವೇರಿ ನೀರಿನ ವಿಚಾರದಲ್ಲಿ “ಅಡ್ಡಗೋಡೆಯ ಮೇಲೆಯ ದೀಪವಿಟ್ಟ” ಅಣ್ಣಾ ಮಲೈ

ಮಂಗಳೂರು: ಕಾವೇರಿ ನೀರಿನ ವಿಚಾರದಲ್ಲಿ ರಾಜಕೀಯ ಬೇಡ. ನಾವೆಲ್ಲರೂ ಅಣ್ಣ ತಮ್ಮಂದಿರಂತೆ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಕರ್ತರ ಕಾವೇರಿ ನೀರಿನ ವಿಚಾರದ ಪ್ರಶ್ನೆಗೆ ಅಣ್ಣಾ ಮಲೈ ಈ ರೀತಿಯಾಗಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರಿಸಿದರು.

ಕರ್ನಾಟಕದಲ್ಲಿ ನೀರಿಗೆ ತೊಂದರೆಯಿದೆ. ಆದರೆ ಕೇಂದ್ರ ಸರಕಾರ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಈ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳುತ್ತದೆ‌. ಆದ್ದರಿಂದ ಭಾವನಾತ್ಮಕ ವಿಚಾರ ಕೈಬಿಟ್ಟು, ಎಲ್ಲಾ ರಾಜ್ಯಗಳು ಚೆನ್ನಾಗಿರಬೇಕೆಂದು ನೋಡಬೇಕು. ಇದರಲ್ಲಿ ರಾಜಕೀಯವಾಗಿ ಮಾತನಾಡುವ ವಿಚಾರವೇ ಇಲ್ಲ.

2019ರ ಲೋಕಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿ ಸೂಚಿಸಲಾಗಿದ್ದ 295 ಯೋಜನೆಗಳನ್ನು ಸಂಪೂರ್ಣಗೊಳಿಸಲಾಗಿದೆ. ಇದೀಗ ಪ್ರಧಾನಿಯವರು ಹೊಸದಾಗಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಆದ್ದರಿಂದ ಈ ಬಾರಿ ಮತ್ತೆ ಮೋದಿಯವರ ಕೈಬಲಪಡಿಸಿ‌. 400+ ಸೀಟ್ ಗಳಲ್ಲಿ ಬಿಜೆಪಿ ಗೆಲ್ಲಬೇಕು‌. ಹಾಗಾಗಿ ಎಲ್ಲರೂ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಅಣ್ಣಾಮಲೈ ಹೇಳಿದರು.

Latest Indian news

Popular Stories