ಬೆಂಗಳೂರು: ಬಿಜೆಪಿ ಧರಣಿ ಹಿಂಪಡೆದ ಹಿನ್ನಲೆಯಲ್ಲಿ ಮತ್ತೆ ಪ್ರಶ್ನೋತ್ತ ಕಲಾಪ ಆರಂಭವಾಗಿದೆ. ಈ ಸಂದರ್ಭದಲ್ಲಿ ಶಾಸಜರಾದ ಸುರೇಶ್ ಶೆಟ್ಟಿ ಅವರ ಹೆಸರು ಪ್ರಸ್ತಾಪಿಸಿದಾಗ ಗೈರು ಹಾಜರಾಗಿದ್ದರು.
ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಎದ್ದು ನಿಂತಾಗ ಯುಟಿ ಕಾದರ್ ನೀವು ಬರಹದಲ್ಲಿ ಪ್ರಶ್ನೆ ಕೇಳಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲಿ ಕೊಟ್ಟಿದ್ದೇನೆ ಎಂದಾಗ ಆ ಕುರಿತು ಪರಿಶೀಲಿಸಿದ ಯುಟಿ ಕಾದರ್ ಉತ್ತರ ಬಂದಿಲ್ಲ ನಾಳೆ ಪರಿಶೀಲಿಸಿ ಕೊಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿ ಎದ್ದುನಿಂತ ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೊಸ ಶಾಸಕರಿಗೆ ಅವಕಾಶ ನೀಡಬೇಕೆಂದಾಗ ಯುಟಿ ಕಾದರ್ “ಅಷ್ಟು ಗಡಿಬಿಡಿ ಮಾಡಬೇಡಿ.ಪ್ರಶ್ನೆ ಅವರದ್ದಲ್ಲ ಪ್ರಶ್ನೆ ಸಮೃದ್ದಿ ಮಂಜುನಾಥ್ ಅವರದ್ದು, ಇವರು ಬೈಂದೂರಿನ ಶಾಸಕರು ಗುರುರಾಜ್ ಅಂಥ ಹೇಳಿ” ಎಂದು ಹೇಳಿದರು. ನಂತರ ಸುನೀಲ್ ಕುಮಾರ್ ಸುಮ್ಮನಾದರು.