ಧರ್ಮದಲ್ಲಿ ಕೈ ಹಾಕಿದವ ಯಾವನೂ ಉಳಿದಿಲ್ಲ: ಸಂಸದ ಜಿಗಜಿಣಗಿ

ವಿಜಯಪುರ : ಧರ್ಮದಲ್ಲಿ ಕೈ ಹಾಕಿದವ ಯಾವನೂ ಈ ದೇಶದಲ್ಲಿ ಉಳಿದಿಲ್ಲ. ಅವರ ಪಕ್ಷವೂ ಉಳಿದಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.


ವಿಜಯಪುರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸನಾತನ ಹಿಂದೂ ಧರ್ಮದ ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸುತ್ತೇನೆ. ಸಣ್ಣ ಸಣ್ಣ ಹುಡುಗರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಉದಯನಿಧಿ ಇಂದು ನಿನ್ನೆ ಮಂತ್ರಿಯಾಗಿದ್ದಾರೆ. ನಾವು ಇಂದಿರಾಗಾಂಧಿ, ರಾಜೀವಗಾಂಧಿ, ಸಂಜಯಗಾಂಧಿ ಕಾಲದಲ್ಲಿ ನೋಡಿದ್ದೇನೆ. ಧರ್ಮದ ವಿಷಯದಲ್ಲಿ ಯಾರು ಕೈ ಹಾಕುತ್ತಾರೆ ಅವರು ಮತ್ತು ಅವರ ಪಕ್ಷವೂ ಉಳಿಯಲ್ಲ. ಧರ್ಮದ ವಿಷಯದಲ್ಲಿ ಯಾರೂ ಕೂಡ ಯಾವ ಪಕ್ಷದವರು ಸಹ ಭಾಗಿಯಾಗಬಾರದು. ಧರ್ಮದಲ್ಲಿ ಕೈ ಹಾಕಿದವರು ಈ ದೇಶದಲ್ಲಿ ಉಳಿದಿಲ್ಲ ಎಂದರು.


ಎಚ್.ಡಿ.ದೇವೇಗೌಡ ಅವರು ಕರ್ನಾಟಕ ಮುಖ್ಯಮಂತ್ರಿ ಇದ್ದಾಗ, ತಾವು ಸಹ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಗೆ ಜೆಡಿಎಸ್ – ಬಿಜೆಪಿ ಮೈತ್ರಿಯಾದರೆ ತಪ್ಪೇನು ಇಲ್ಲ. ಲೋಕಸಭೆ ಚುನಾವಣೆ ಪೂರ್ವ ಮೈತ್ರಿಯನ್ನು ನಮ್ಮ ನಾಯಕರು ಹೈಕಮಾಂಡ್ ಮಟ್ಟದಲ್ಲಿ ಮಾಡಿಕೊಂಡರೆ ಯಾವುದೇ ಅಭ್ಯಂತರವಿಲ್ಲ. ಜೆಡಿಎಸ್ ಮೈತ್ರಿಗೆ ಯಾರೇ ಬಂದರೂ ಸಹ ಸ್ವಾಗತಿಸುತ್ತೇವೆ ಎಂದು ಹೇಳಿದರು.


ಕೇಂದ್ರ ಸರ್ಕಾರ ಇಂಡಿಯಾ ಬದಲು ದೇಶಕ್ಕೆ ಭಾರತ ಹೆಸರು ಕರೆಯಲು ಚಿಂತನೆ ನಡೆಸಿದೆ ನಾನು ಇದನ್ನು ಸ್ವಾಗತಿಸುತ್ತೇನೆ. ಜಗತ್ತಿನ ಎಲ್ಲ ದೇಶಗಳಿಗೂ ಒಂದೇ ಹೆಸರಿದೆ. ಭಾರತಕ್ಕೆ ಏಕೆ ಎರಡು ಹೆಸರು?. ವಿದೇಶಿಯರು ಸ್ವಾತಂತ್ರ ಪೂರ್ವದಲ್ಲಿ ಭಾತರತವನ್ನು ಇಂಡಿಯಾ ಎಂದು ಕರೆದಿದ್ದರು. ಈಗ ನಾವ್ಯಾಕೆ ಅದೇ ಹೆಸರನ್ನು ಕರೆಯಬೇಕು. ಭಾರತ ಎಂದು ಕರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಭಾರತ ಎಂದು ಕರೆಯಲು ನನ್ನದು ಸಹಮತ ಇದೆ ಎಂದರು.


ನಾನು ವಿಜಯಪುರ ಮೀಸಲು ಲೋಕಸಭೆಗೆ ಸ್ಥಾನಕ್ಕೆ ಮತ್ತೊಮ್ಮೆ ಸ್ಪರ್ಧಿಸಲು ಇಚ್ಚಿಸುತ್ತೇನೆ. ನಾನು ಮತ್ತೇ ಲೋಕಸಭೆಗೆ ಸ್ಪರ್ಧೆ ಮಾಡಬೇಕು ಎನ್ನುವುದು ಜನರ ಅಭಿಪ್ರಾಯವು ಇದೆ. ಕೆಲವರು ತಾವು ಸ್ಪರ್ಧಿಸಬೇಕೆನ್ನುವ ಉದ್ದೇಶದಿಂದ ನನ್ನ ಹೆಸರು ಹಾಳು ಮಾಡುತ್ತಿದ್ದಾರೆ. ಸಾವಿರ ಜನ ಟಿಕೆಟ್ ಆಕ್ಷಾಂಕಿಗಳು ಬರಲಿ, ಅದನ್ನು ಬಹಿರಂಗವಾಗಿ ಹೇಳಲಿ ಅದು ಬಿಟ್ಟು ಸಣ್ಣ ಸಣ್ಣ ಹುಡುಗರಿಗೆ ರಾತ್ರಿ ವ್ಯವಸ್ಥೆ ಮಾಡಿ, ಸಾಮಾಜಿಕ ಜಾಲಜಾಣದಲ್ಲಿ ಅಪಪ್ರಚಾರ ಮಾಡಿಸುತ್ತಿದ್ದಾರೆ ಇದು ಸರಿಯಲ್ಲ. ಬಿಜೆಪಿ ಹೈ ಕಮಾಂಡ್ ಟಿಕೆಟ್ ನನಗೆ ನೀಡುತ್ತದೆ ಎನ್ನುವ ಭರವಸೆ ನನಗೆ ಇದೆ. ನಾನು ಈಗಾಗಲೇ 12 ಚುನಾವಣೆ ಎದುರಿಸಿದ್ದೇನೆ. ಅದರಲ್ಲಿ 11 ಬಾರಿ ಗೆಲುವು ಸಾಧಿಸಿ ಒಮ್ಮೆ ಮಾತ್ರ ಸೋತಿದ್ದೇನೆ. ಅದು ಜನ ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಸಾಕ್ಷಿ ಎಂದರು.

Latest Indian news

Popular Stories