ಮಡಿಕೇರಿ ಮೇ 19 : ಕೋವಿಡ್ ಸೋಂಕಿತರಿಂದ ಹಣ ಪಡೆದು ಚಿಕತ್ಸೆ ನೀಡುತ್ತಿದ್ದ ಆರೋಪದಡಿ ಜಿಲ್ಲಾ ಆರೋಗ್ಯ ಇಲಾಖೆಯ ವೈದ್ಯ ಡಾ.ಎ.ಸಿ.ಶಿವಕುಮಾರ್ ಎಂಬುವವರನ್ನು ಅಮಾನತುಗೊಳಿಸಲಾಗಿದೆ.
ಹಣ ನೀಡಿದವರಿಗೆ ಮಾತ್ರ ಉತ್ತಮ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆ ಮತ್ತು ಆಡಿಯೋ ಸಾಕ್ಷ್ಯ ಲಭ್ಯವಾಗಿರುವ ಕಾರಣ ಡಾ.ಎ.ಸಿ.ಶಿವಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ