ದಲಿತ ವಿದ್ಯಾವಂತರು ಮೋದಿಯ ಕಪಟ ನಾಟಕವನ್ನು ಅರ್ಥಮಾಡಿಕೊಳ್ಳದೆ ಅಂಧಭಕ್ತರಂತೆ ವರ್ತಿಸುವುದು ಅಂಬೇಡ್ಕರ್‌ಗೆ ಬಗೆದ ದ್ರೋಹ – ಜಯನ್ ಮಲ್ಪೆ

ಮೋದಿಯ ಸರ್ವಾಧಿಕಾರ ದಲಿತರಿಗೆ ಸಂಚಕಾರ:ಜಯನ್ ಮಲ್ಪೆ
ಉಡುಪಿ:ಧರ್ಮದ ಹೆಸರಿನಲ್ಲಿ ಸರ್ವಾಧಿಕಾರ ಮಾಡುವ ಮೋದಿಯ ಹಿಂದೆ ದಲಿತರನ್ನು ಮತ್ತು ಅಂಬೇಡ್ಕರ್ ಬರೆದ ಸಂವಿಧಾನವನ್ನು ನಾಶಮಾಡುವ ಸಂಚು ರೂಪಿಸಿರುವುದಾಗಿ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಆರೋಪಿಸಿದ್ದಾರೆ.


133ಅವರು ಭಾನುವಾರ ಬ್ರಹ್ಮಾವರ ಸಮೀಪದ ಹಂಗಾರಕಟ್ಟೆಯ ಜೈಭೀಮ್ ಬಳಗ ಆಯೋಜಿಸಿದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ರವರ ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ,
ಮೋದಿ ಎಷ್ಟು ದೊಡ್ಡ ಹಗರಣ ಮಾಡಿದರೂ ಅವರನ್ನೇ ದೇವರು ಅನ್ನೋ ಜನ ನಮ್ಮ ದಲಿತ ಸಮಾಜದಲ್ಲೂ ಇದ್ದಾರೆ.ಮೋದಿ ಭ್ರಷ್ಟಾಚಾರ ಮಾಡಿ,ಬಡಜನರ ದುಡ್ಡನ್ನು ನುಂಗಿ ನೀರು ಕುಡಿಯುತ್ತಾ,ಬಡವರ ರಕ್ತ ಹೀರಿ ಅದನ್ನು ಉದ್ಯಮಿಗಳಗೆ ಅಭಿಷೇಕ ಮಾಡುತ್ತಿದ್ದಾರೆ ಎಂದಿರುವ ಜಯನ್ ಮಲ್ಪೆ ದಲಿತ ವಿದ್ಯಾವಂತರು ಕೂಡ ಮೋದಿಯ ಕಪಟ ನಾಟಕವನ್ನು ಅರ್ಥಮಾಡಿಕೊಳ್ಳದೆ ಅಂಧಭಕ್ತರಂತೆ ವರ್ತಿಸುವುದು ಅಂಬೇಡ್ಕರ್‌ಗೆ ಬಗೆದ ದ್ರೋಹ ಎಂದರು.


ಮುಖ್ಯ ಅತಿಥಿಯಾದ ದಲಿತ ಮುಖಂಡ ಶೇಖರ್ ಹಾವಂಜೆ ಮಾತನಾಡಿ ಅಂಬೇಡ್ಕರ್‌ರನ್ನು ಸ್ವಾರ್ಥಕ್ಕೆ ಬಳಸುವವರು ದೇಶದ್ರೋಹಕ್ಕೆ ಸಮ,ನಿಜವಾದ ದಲಿತ ನಾಯಕರು ಅವರ ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಳ್ಳಬೇಕು,ಮೌಢ್ಯಕ್ಕೆ ಬಲಿಯಾಗದೆ ಧಮ್ಮ ಮಾರ್ಗದಲ್ಲಿ ನಡೆದರೆ ಮಾತ್ರ ದಲಿತರು ಅಭಿವೃದ್ಧಿಹೊಂದಲು ಸಾಧ್ಯ ಎಂದರು.

ಉಡುಪಿ ವಿಧ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ಸೌರಭ ಬಳ್ಳಾಲ್ ಮಾತನಾಡಿ ಅಂಬೇಡ್ಕರ್ ಬರೆದ ಸಂವಿಧಾನದ ಆಶಯವನ್ನು ಉಳಿಸುವುದು ಇಂದು ಪ್ರತಿಯೊಬ್ಬರ ಕರ್ತವ್ಯ,ದಲಿತರು ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುವಂತೆ ಕೆಲಸಮಾಡಬೇಕು ಎಂದರು. ವೇದಿಕೆಯಲ್ಲಿ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷರಾದ ಹರೀಶ್ ಸಾಲ್ಯಾನ್,ಗ್ರಾ.ಪಂಚಾಯತಿ ಸದಸ್ಯೆ ಶ್ರೀಮತಿ ಸುಲೋಚನಾ ಸುಧಾಕರ್, ಜೈಭೀಮ್ ಬಳಗದ ಅಧ್ಯಕ್ಷರಾದ ಅಣ್ಣಪ್ಪ ಗೆದ್ದೆಮನೆ,ಗಣೇಶ್ ಹಂಗಾಕಟ್ಟೆ ಉಪಸ್ಥಿತರಿದ್ದರು.
ಸಂತೋಷ್ ಸ್ವಾಗತಿಸಿ,ರಂಗ ಹಂಗಾರಕಟ್ಟೆ ವಂದಿಸಿದರು.ಸದಾನಂದ ಕಾರ್ಯಕ್ರಮ ನಿರೂಪಿಸಿದರು

Latest Indian news

Popular Stories