ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದವರ ಮೇಲೆ ಎಫ್.ಐ.ಆರ್: ಎಬಿವಿಪಿ ಉಡುಪಿಯಿಂದ ಪ್ರತಿಭಟನೆ

ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ನೇಹಾ ಹೀರೆಮಠ ಎನ್ನುವ ವಿದ್ಯಾರ್ಥಿನಿಯ ಲವ್ ಜಿಹಾದ್ ಶಂಕಿತ ಕೊಲೆ ಪ್ರಕರಣವನ್ನು ಮತ್ತು ಕಾರ್ಕಳದಲ್ಲಿ ಇದೆ ವಿಷಯಯದ ಪ್ರತಿಭಟನೆಗೆ ಎಬಿವಿಪಿ ಕಾರ್ಯಕರ್ತರ ಮೇಲೆ ಮಾಡಿದ ಎಫ್ಐಆರ್ ಖಂಡಿಸಿ ಎಬಿವಿಪಿ ಉಡುಪಿ ಸಹಸ್ರ ಸಂಖ್ಯೆಯಲ್ಲಿ ಬೃಹತ್ ಪ್ರತಿಭಟನಾ ಜಾಥಾವನ್ನು ನಗರದ ಜೋಡುಕಟ್ಟೆಯಿಂದ ಪ್ರಾರಂಭಿಸಿ ಕವಿ ಮುದ್ದಣ್ಣ ಮಾರ್ಗವಾಗಿ ಸಾಗಿ ಕ್ಲಾಕ್ ಟವರ್ ನಲ್ಲಿ ಸಂಪನ್ನಗೊಳಿಸಲಾಯಿತು.

ರಾಜ್ಯ ಸಹ-ಕಾರ್ಯದರ್ಶಿ ಹರ್ಶಿತ್ ಕೊಯ್ಲ ಮಾತನಾಡಿ ಪ್ರತಿಭಟಿದಕ್ಕೆ ಹಾಕಿದ ಎಫ್ಐಆರ್ ನ ಬೊಡ್ಡು ಬೆದರಿಕೆಗೆ ಹೆದರುವ ಸಂಘಟನೆ ಎಬಿವಿಪಿಯಲ್ಲಾ ಇಲ್ಲಿ ಹೋರಾಟದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಬಿರಿಯಾನಿ ಆಸೆಗೊ ಅಥವಾ ಯಾವುದೇ ಆಮಿಷಕ್ಕೆ ಒಳಗಾಗಿ ಸೇರಿದವರಲ್ಲ ಒಂದು ಹೆಣ್ಣು ಮಗಳಿಗಾದ ಅನ್ಯಾಯವನ್ನು ಖಂಡಿಸಿ ನ್ಯಾಯಗೋಸ್ಕರ ಬೀದಿಗಿಳಿದವರು. ಸರ್ಕಾರ ಈ ಕೂಡಲೇ ಎಚ್ಚೆತ್ತು ವಿದ್ಯಾರ್ಥಿಗಳ ಮೇಲೆ ಹೂಡಿದ ಎಫ್ಐಆರ್ ಅನ್ನು ವಜಾಗೊಳಿಸಬೇಕು ಇಲ್ಲದೆ ಹೋದಲ್ಲಿ ರಾಜ್ಯಾದ್ಯಂತ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ವಿದ್ಯಾರ್ಥಿನಿ ಮಾಣಿಕ್ಯ ಭಟ್ ಮಾತನಾಡಿ ಇತ್ತಿಚಿನ ದಿನದಲ್ಲಿ ಕಾಲೇಜು ಕ್ಯಾಂಪಸ್ ಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಅದು ನೇಹಾ ಹೀರೆಮಠ ಅವರ ಕೊಲೆ ಪ್ರಕರಣ ಆಗಿರಬಹುದು ಅಥವಾ ಕಡಬದಲ್ಲಿ ನಡೆದ ಆಸಿಡ್ ದಾಳಿಯಾಗಿರಬಹುದು ಅಥವಾ ಹಾಗೂ ಉಡುಪಿಯಲ್ಲಿ ಈ ಹಿಂದೆ ನಡೆದ ವಿಡಿಯೋ ಪ್ರಖರಣವಾಗಿರಬಹುದು ಇದರಿಂದಾಗಿ ನಮಗೆ ಭದ್ರತೆಯ ಕೊರತೆ ಎದ್ದು ಕಾಣಿಸುತ್ತಾ ಇದೆ. ರಾಜ್ಯ ಸರ್ಕಾರ ಈ ಕೂಡಲೇ ಈ ವಿಷಯವಾಗಿ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿ ಶ್ರೀರಾಮ್ ಅಂಗೀರಸ, ಜಿಲ್ಲಾ ಸಂಚಾಲಕ ಗಣೇಶ್ ಪೂಜಾರಿ, ತಾಲೂಕು ಸಂಚಾಲಕರುಗಳಾದ ಅಜಿತ್ ಜೋಗಿ ಮತ್ತು ಶ್ರೇಯಸ್ ಅಂಚನ್, ನಗರ ಕಾರ್ಯದರ್ಶಿ ಶ್ರೀವತ್ಸ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸಂಹಿತಾ ಮತ್ತು ಪ್ರಮುಖರಾದ ಕಾರ್ತಿಕ್, ನವೀನ್, ಸ್ವಸ್ತಿಕ್, ವರುಣ್, ಮನು, ಮಂಗಳಗೌರಿ, ಸುಚಿತ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Latest Indian news

Popular Stories