ಕಾರ್ಕಳ: ವಿವಾಹಿತ ಯುವತಿ ಆತ್ಮಹತ್ಯೆ

ಕಾರ್ಕಳ, ಜು.5: ಪತಿಯೊಂದಿಗೆ ಕ್ಷುಲ್ಲಕ ಜಗಳಕ್ಕೆ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಜೀವನ ಅಂತ್ಯಗೊಳಿಸಿದ್ದಾರೆ.

ಮೃತರನ್ನು ಮುತ್ರಾಳ್ ದೇವಸ್ಥಾನದ ಬಳಿಯ ಬಜಗೋಳಿ ನಿವಾಸಿ ಭವ್ಯಾ ಭಂಡಾರಿ (31) ಎಂದು ಗುರುತಿಸಲಾಗಿದೆ.

ಜುಲೈ 3 ರಂದು ರಾತ್ರಿ ಭವ್ಯಾ ತನ್ನ ಪತಿಯೊಂದಿಗೆ ಕೋಳಿ ಸಾಕಣೆ ವಿಷಯಕ್ಕೆ ಕೋಪಗೊಂಡು ಜಗಳವಾಡಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಕಾರ್ಕಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ರೀತಿಯ ತೊಂದರೆಗೆ ಒಳಗಾಗಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯವನ್ನು ಪಡೆಯಿರಿ. ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 9152987821 ಗೆ ಕರೆ ಮಾಡಿ.

Latest Indian news

Popular Stories