ಉಡುಪಿ: ವಿವಾಹಿತ ಯುವಕ ನಾಪತ್ತೆ

ಉಡುಪಿ: ವಿವಾಹಿತ ಯುವಕನೊಬ್ಬ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.

ನಾಪತ್ತೆಯಾದವರು ಅನಿಲ್ ಕುಮಾರ್(22) ಎಂದು ತಿಳಿದು ಬಂದಿದೆ. ಕಳೆದ 8 ತಿಂಗಳಿನಿಂದ ಬ್ರಹ್ಮಾವರದ ಹೇರೂರು ನಲ್ಲಿರುವ ಸುಪ್ರೀಮ್ ಫೀಡ್ಸ್ ಕಂಪನಿಯಲ್ಲಿ ಕೆಲಸವನ್ನು ಮಾಡಿಕೊಂಡಿದ್ದು ಉಡುಪಿಯ ಸಂತೆಕಟ್ಟೆ ಎಂಬಲ್ಲಿ ಮನೆ ಬಾಡಿಗೆ ಮಾಡಿಕೊಂಡು ವಾಸವಾಗಿದ್ದರು.

ತನ್ನ ತಾಯಿಗೆ ಆರೋಗ್ಯ ಸಮಸ್ಯೆ ಇದ್ದ ಕಾರಣದಿಂದ ತಾಯಿಯ ಊರಿಗೆ ಹೋಗಿದ್ದು, ಗಂಡ ಅನಿಲ್ ಕುಮಾರ್ ರವರು ಪತ್ನಿಗೆ ಪ್ರತಿನಿತ್ಯ ಕರೆಮಾಡುತ್ತಿದ್ದು, ಒಂದು ದಿನ ಅನಿಲ್ ಕುಮಾರ್ ಕರೆ ಮಾಡಿ ತಾನು ಅಡವಿಟ್ಟಿದ್ದ ಚಿನ್ನ ವನ್ನು ಬಿಡಿಸಿಕೊಂಡು ಊರಿಗೆ ಬರುವುದಾಗಿ ತಿಳಿಸಿ 1,00,000/- ಲಕ್ಷ ರೂಪಾಯಿ ಹಣವನ್ನು ಫೋನ್ ಪೇ ಮುಖಾಂತರ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಎಪ್ರಿಲ್ 29 ರಂದು ದೂರವಾಣಿ ಕರೆ ಮಾಡಿದಲ್ಲಿ ಸ್ವೀಕರಿಸುವುದಿಲ್ಲ ನಂತರ ಕರೆ ಮಾಡಿದಲ್ಲಿ ನಂಬರ್ ಸ್ವಿಚ್ ಆಫ್ ಬರುತ್ತಿದ್ದು. ಪಿರ್ಯಾದಿದಾರರು ಅನುಮಾನಗೊಂಡು ಮೇ 2 ರಂದು ಅನಿಲ್ ಕುಮಾರ್ ರವರು ಬಾಡಿಗೆ ವಾಸವಿದ್ದ ಮನೆಗೆ ಬಂದು ವಿಚಾರಿಸಿದಲ್ಲಿ ಮನೆ ಬಿಟ್ಟು ಹೋಗಿರುವುದಾಗಿ ತಿಳಿದುಬಂದಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 85/2024 ಕಲಂ:ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories