ವಿಜಯಪುರ: ವಿಜಯಪುರ ತಾಲ್ಲೂಕಿನ ಅರಕೇರಿಯಲ್ಲಿರುವ ಆಪ್ಟೆ ಫೌಂಡೇಶನ್ ನ ಸ್ವಾಭಿಮಾನ ವೃದ್ಧಾಶ್ರಮದಲ್ಲಿ ‘ನಿಸರ್ಗದ ಮಡಿಲಲ್ಲಿ ಒಂದು ದಿನ’ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಹಾಗೂ ಇದೇ ಸಂದರ್ಭದಲ್ಲಿ ಮಧುಮೇಹ ಹಾಗೂ ರಕ್ತದೊತ್ತಡ ಉಚಿತ ತಪಾಸಣಾ ಶಿಬಿರ ನಡೆಯಿತು.
ಈ ಸಂದರ್ಭದಲ್ಲಿ ಮಧುಮೇಹ ತಜ್ಞ, ಸಮಾಜ ಸೇವಕ ಡಾ. ಬಾಬುರಾಜೇಂದ್ರ ನಾಯಿಕ ಮಾತನಾಡಿ, ಇಳಿ ವಯಸ್ಸಿನಲ್ಲಿ ಕ್ರಮಬದ್ಧವಾದ ಆರೋಗ್ಯದ ಕಾಳಜವಹಿಸುವುದು ಅನಿವಾರ್ಯವಾಗಿದ್ದು, ನಮ್ಮ ದೇಹ ಮತ್ತು ಪ್ರಕೃತಿಯ ನಡುವೆ ಇದ್ದ ಸಂಬಂಧಗಳು ಚೆನ್ನಾಗಿ ಇಟ್ಟುಕೊಂಡರೆ ನಾವೆಲ್ಲರೂ ಆರೋಗ್ಯವಂತರಾಗಿ ಇರಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಆಷ್ಟೆ ಫೌಂಡೇಶನ್ ಮುಖ್ಯಸ್ಥ ಪತ್ರಕರ್ತರುವಿನಯ ಆಷ್ಟೆ, ರಾಮಸಿಂಗ ರಜಪುತ, ರಾಹುಲ್ ಆಷ್ಟೆ, ರೋಹಿತ ಆಷ್ಟೆ ದೇಶ ರಕ್ಷಕ ಪಡೆಯ ಸಂಸ್ಥಾಪಕ ರೋಹನ ಆಷ್ಟೆ, ಈಶ್ವರ ತೋಷ್ಟಿವಾಲ, ಅನಿಲ ಚವಾಣ, ನಂದಾ ಛತ್ರೆ ಮುಂತಾದವರು ಉಪಸ್ಥಿತರಿದ್ದರು.