ನಿವೃತ ಸೇನಾಧಿಕಾರಿಯಿಂದ ಉಗಿಸಿಕೊಂಡ ಅರ್ನಬ್ ಗೋಸ್ವಾಮಿ!

ನವದೆಹಲಿ: ವಿವಾದಾತ್ಮಕ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರನ್ನು ಮತ್ತೊಮ್ಮೆ ಪ್ಯಾನೆಲಿಸ್ಟ್ ಒಬ್ಬರು ತರಾಟೆಗೆ ತೆಗೆದುಕೊಂಡು ಮುಖಭಂಗಕ್ಕೀಡಾಗಿದ್ದಾರೆ.

ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಗೋಕುಲ್ ಚಂದ್ರನ್ ಅವರೊಂದಿಗೆ ನೇರ ಪ್ರಸಾರ ಟಿವಿ ಕಾರ್ಯಕ್ರಮವೊಂದರಲ್ಲಿ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ತರಾಟೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಆಕ್ರೋಶದಿಂದ ಪೇಚಾದ ಅರ್ನಬ್ ಸೌಂಡ್ ಮ್ಯೂಟ್ ಮಾಡಿಸಿದ ಘಟನೆ ವರದಿಯಾಗಿದೆ.

ಗೋಕುಲ್ ಚಂದ್ರನ್ ಅವರು ಅರ್ನಬ್ ಅವರನ್ನು “ಕೊಳಕು ಮನಸ್ಸಿನ ವ್ಯಕ್ತಿ, ನೈತಿಕತೆಯಿಲ್ಲದ ಪತ್ರಿಕೋದ್ಯಮವನ್ನು ನಡೆಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಪೇಚಿಗೊಳಗಾದ ಅರ್ನಬ್ ನಂತರ ಚಂದ್ರನ್ ಅವರನ್ನು ಮ್ಯೂಟ್ ಮಾಡಿ ಅವರನ್ನು ಕಾರ್ಯಕ್ರಮದಿಂದ ಕೈಬಿಟ್ಟಿದ್ದಾರೆ.

ಚರ್ಚೆಯ ವೇಳೆ ಗೋಸ್ವಾಮಿ ಅವರು ಸತತವಾಗಿ  ‘ವಾದ್ರಾ ಕಾಂಗ್ರೆಸ್’ ಎಂದು ಹೇಳಿರುವುದು  ಚಂದ್ರನ್ ಅವರಿಗೆ ಆಕ್ರೋಶವುಂಟು ಮಾಡಿದಾಗ, “ಅದರಲ್ಲೇನು ನಿಂದನಾತ್ಮಕವಾಗಿದೆ?” ಎಂದು ಮರು ಪ್ರಶ್ನೆ ಮಾಡಿದ್ದಾರೆ. ಇದರಿಂದ ಆಕ್ರೋಶಿತರಾದ ಚಂದ್ರನ್ ಅವರು “ವೈ ದಿ ಹೆಲ್ ಡು ಯು ಕಾಲ್ ವಾದ್ರಾ ಕಾಂಗ್ರೆಸ್?” ಎಂದು ಕೇಳಿದಾಗ ಅರ್ನಬ್ “ವೈ ದಿ ಹೆಲ್ ಡಿಡ್ ಐ ಕಾಲ್ ವಾದ್ರಾ ಕಾಂಗ್ರೆಸ್. ಕಾಂಗ್ರೆಸ್ ಪಕ್ಷ ಈ ಹಿಂದೆ ಇಂದಿರಾ ಕಾಂಗ್ರೆಸ್ ಎಂದು ಕರೆಯಲ್ಪಡುತ್ತಿದ್ದರೆ ಈಗ ವಾದ್ರಾ ಕಾಂಗ್ರೆಸ್ ಎಂದು ಜನಪ್ರಿಯವಾಗಿದೆ” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಚಂದನ್, “ನಿಮ್ಮ ಮನಸ್ಸಿನಲ್ಲಿ ಕೊಳಕು ತುಂಬಿದೆ ಹಾಗೂ ನೀವು ನೈತಿಕತೆಯಿಲ್ಲದ ಪತ್ರಿಕೋದ್ಯಮ ನಡೆಸುತ್ತಿದ್ದೀರಿ, ಈ ಕಾರಣದಿಂದ ಈ ಹೆಸರು ಬಳಸುತ್ತಿದ್ದೀರಿ” ಎಂದರು.

Latest Indian news

Popular Stories