ಮಣಿಪಾಲ: ಬ್ರಹ್ಮಾವರದಲ್ಲಿ ರಸ್ತೆ ಅಫಘಾತಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿ ತಮ್ಮ ಅಂಗಾಂಗ ದಾನ ಮಾಡಿ ಆರು ಜನರ ಜೀವ ಉಳಿಸಿದ್ದಾರೆ.
ಉಪ್ಪಿನಕೋಟೆಯಲ್ಲಿ ಅಫಘಾತಕ್ಕೀಡಾಗಿದ್ದ ಶ್ರೀನಿವಾಸ್ ಎಂಬುವವರ ಮೆದುಳು ನಿಷ್ಕ್ರಿಯಗೊಂಡಿತ್ತು. ನಂತರ ಅವರ ತಂದೆ ತನ್ನ ಮಗನ ಅಂಗಾಂಗ ದಾನ ಮಾಡಿ ಇತರರ ಜೀವ ಉಳಿಸಲು ಮುಂದಾಗಿದ್ದಾರೆ. ಅದರಂತೆ ಎರಡು ಮೂತ್ರ ಪಿಂಡಗಳು, ಯಕೃತ್ತು, ಚರ್ಮ, ಕಾರ್ನಿಯಾ/ಕಣ್ಣು ಗುಡ್ಡಗಳನ್ನು ತೆಗೆದು ಆರು ಜನರ ಜೀವ ಉಳಿಸಲಾಗಿದೆ.
ಎರಡು ಕಾರ್ನಿಯಾ, ಮೂತ್ರಪಿಂಡ, ಚರ್ಮವನ್ನು ಮಣಿಪಾಲದಲ್ಲೇ ರೋಗಿಗಳಿಗೆ ನೀಡಲಾಗಿದೆ. ಯಕೃತ್ತನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ರವಾನಿಸಲಾಯಿತು.