ಕಾರವಾರ : ಯಲ್ಲಾಪುರ – ಶಿರಸಿ ರಸ್ತೆಯಲ್ಲಿ ಬೈಕ್ ಸ್ಕಿಡ್ ಆದ ಪರಿಣಾಮ ಪ್ರಜ್ಞೆ ತಪ್ಪಿ ಬಿದ್ದಿದ್ದ ಯುವಕನಿಗೆ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಪ್ರಥಮ ಚಿಕಿತ್ಸೆ ನೀಡಿ ಜೀವ ರಕ್ಷಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಹಳಿಯಾಳ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಪ್ರಚಾರ ಮುಗಿಸಿ, ಶಿರಸಿಗೆ ಕಾರ್ ನಲ್ಲಿ ಡಾ. ಅಂಜಲಿ ವಾಪಾಸ್ ಆಗುತ್ತಿದ್ದರು. ಯಲ್ಲಾಪುರ ಶಿರಸಿ ರಸ್ತೆಯಲ್ಲಿ ಸಾಗುವಾಗ ರಸ್ತೆಯಲ್ಲಿ ಯುವಕ ಬಿದ್ದಿರುವುದನ್ನು ಗಮನಿಸಿದ ಕಾಂಗ್ರೆಸ್ ಅಭ್ಯರ್ಥಿ ,ಕಾರ್ ನಿಂದ ಇಳಿದು ಯುವಕನಿಗೆ ಪ್ರಥಮ ಚಿಕಿತ್ಸೆ ನೀಡಿದರು.
ವಿನಾಯಕ ಶೆಟ್ಟರ್ ಎಂಬ ಯುವಕ ಬೈಕ್ ಅಪಘಾತ ದಿಂದ ರಸ್ತೆಯಲ್ಲಿ ಬಿದ್ದಿದ್ದ. ಆತನನ್ನು ತಮ್ಮದೇ ಕಾರ್ ನಲ್ಲಿ ಶಿರಸಿಯ ಪಂಡಿತ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ,ಸ್ವತಃ ಅಲ್ಲಿನ ವೈದ್ಯರ ಜೊತೆ ಚಿಕಿತ್ಸೆ ನೀಡಿದರು. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಡಾ.ಅಂಜಲಿ ಅವರ ಈ ಮಾನವೀಯತೆ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
…..