ಔಷಧಿ ಉಗ್ರಾಣಕ್ಕೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಓ ಭೇಟಿ ಬೀದರ

ಬೀದರ ಏಪ್ರೀಲ್ ೧೨ (ಕ.ವಾ.): ಬೀದರ ಹಳೆಯ ಸಿಟಿನಲ್ಲಿರುವ ಔಷಧಿ ಉಗ್ರಾಣಕ್ಕೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಹೀರಾ ನಸೀಮ್ ಅವರು ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದರು.

ಔಷಧಿ ಉಗ್ರಾಣದಲ್ಲಿ ಲಭ್ಯವಿದ್ದ ಕೋರೊನಾ ಲಸಿಕೆ ಸೇರಿದಂತೆ ಇನ್ನೀತರ ನಾನಾ ಔಷಧಿಯ ದಾಸ್ತಾನಿನ ಬಗ್ಗೆ ಇದೆ ವೇಳೆ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು.

ಕೋವಿಡ್ ಲಸಿಕೆಯನ್ನು ಅಗತ್ಯ ಪ್ರಮಾಣದಲ್ಲಿ ಲಭ್ಯವಿಟ್ಟುಕೊಳ್ಳಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ವಿ.ಜಿ.ರೆಡ್ಡಿ ಅವರಿಗೆ ಸೂಚಿಸಿದರು. ಇದೆ ಸಂದರ್ಭದಲ್ಲಿ ಇನ್ನೀತರ ವೈದ್ಯಾಧಿಕಾರಿಗಳು ಇದ್ದರು.

Latest Indian news

Popular Stories