ಮಂಜುನಾಥ ಬಡಾವಣೆ ಪ್ರವಾಹದಲ್ಲಿ ಮುಳುಗಡೆ – ಜನಜೀವನ ಅಸ್ತವ್ಯಸ್ತ

ಹುಣಸೂರು : ನಿನ್ನೆ ಸಂಜೆ ಹುಣಸೂರು ಪಟ್ಟಣ ದಲ್ಲಿ ಭಾರಿ ಪ್ರಮಾಣದ ಮಳೆ ಸುರಿದಿದ್ದು ಅಲ್ಲಲ್ಲಿ ನೀರು ನಿಂತಿದ್ದು ಜನ ಜೀವನ ಅಷ್ಟವ್ಯಾಸ್ತವಾಗಿದೆ.ಪ್ರತಿಷ್ಠಿತ ಮಂಜುನಾಥ ಬಡಾವಣೆ ಪ್ರವಾಹದಲ್ಲಿ ಮುಳುಗಡೆಯಾಗಿದೆ.

ಸಂಜೆ 330ರ ಸುಮಾರಿಗೆ ಆರಂಭಗೊಂಡ ಮಳೆ ಸತತ ಎರಡು ಗಂಟೆಗಳ ಕಾಲ ಸುರಿಯಿತು.ಆಕಾಶವೇ ತೂತಾದಂತೆ ಸುರಿದ ಮಳೆ ಕ್ಷಣಮಾತ್ರದಲ್ಲಿ ಇಡೀ ಪರಿಸರವನ್ನೇ ಬದಲಾಯಿಸಿಬಿಟ್ಟಿತು.

ರಾಜಕಾಲುವೆ ಮಾಯ, ಮೂಲ ಸೌಕರ್ಯಗಳಿಂದ ಬಳಲುತ್ತಿರುವ ಮಂಜುನಾಥ ಬಡಾವಣೆಯ ನಿವಾಸಿಗಳು ಮತ್ತೆ ಸಂಕಷ್ಟಕ್ಕೆ ಸಿಲುಕಿದರು.ಪಟ್ಟಣದ 22ನೇ ವಾರ್ಡ್‌ನಲ್ಲಿ ಕೂಡ ಮಳೆನೀರಿನಿಂದಾಗಿ ಜನರು ಸಂಕಷ್ಟ ಅನುಭವಿಸಿದರು. ರಸ್ತೆಗಳು ನೀರಿನಿಂದ ಮುಳುಗಿದ್ದವು. ದ್ವಿಚಕ್ರವಾಹನಗಳು ಪ್ರವಾಹದಂತೆ ಹರಿಯುತ್ತಿದ್ದ ನೀರಿನ ಮಧ್ಯೆ ತೇಲುತ್ತಿದ್ದವು.

Latest Indian news

Popular Stories