ಬಂಟ್ವಾಳ: ಪೋಷಕರ ಕಣ್ಣೆದುರೇ ನದಿ ಪಾಲಾದ ಬಾಲಕಿಯರು

ಮಂಗಳೂರು: ಪೋಷಕರ ಜೊತೆಗೆ ವಿಹಾರಕ್ಕೆಂದು ತೆರಳಿದ್ದ ಬಾಲಕಿಯರಿಬ್ಬರು ನೇತ್ರಾವತಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಾವೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ನಡೆದಿದೆ.

ಉಳ್ಳಾಲ ನಿವಾಸಿಗಳಾದ ಅನ್ಸಾರ್ ಎಂಬವರ ಪುತ್ರಿ ಆಸ್ರಾ (11) ಮತ್ತು ಇಲ್ಯಾಸ್ ಎಂಬವರ ಪುತ್ರಿ ಮರ್ಯಮ್ ನಾಶಿಯ(14) ನದಿಯಲ್ಲಿ ಮುಳುಗಿ ಮೃತಪಟ್ಟ ಬಾಲಕಿಯರು.

ರವಿವಾರ ನಾವೂರ ಮೈಂದಾಳದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ಇಲ್ಯಾಸ್ ಮತ್ತು ಕುಟುಂಬ, ಸಂಜೆ ವೇಳೆ ಮನೆಯವರ ಜೊತೆಗೆ ನಾವೂರಿನ ನೀರಕಟ್ಟೆಯಲ್ಲಿ ನೇತ್ರಾವತಿ ನದಿಗೆ ತೆರಳಿದ್ದರು.

ನೀರಿನಲ್ಲಿ ಆಟವಾಡುತ್ತಿದ್ದ ವೇಳೆಆಕಸ್ಮಿಕವಾಗಿ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ. ಮಕ್ಕಳು ಕಣ್ಣೆದುರು ನೀರುಪಾಲಾಗುವುದನ್ನು ಕಂಡರೂ ಈಜು ಬಾರದ ಕಾರಣ ಪೋಷಕರಿಗೆ ಮಕ್ಕಳನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.
ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories