ಈ ಹಿಂದಿನಂತೆ ಸಮವಸ್ತ್ರದೊಂದಿಗೆ ಶಿರವಸ್ತ್ರ ಧರಿಸಿ ತರಗತಿಗೆ ಹಾಜರಾಗುವಂತೆ ವಿನಂತಿಸಿ ಕುಂದಾಪುರದ ಸಂತ್ರಸ್ಥ ವಿದ್ಯಾರ್ಥಿನೀಯರಿಂದ ಅಪರ ಜಿಲ್ಲಾಧಿಕಾರಿ ಮನವಿ

ಉಡುಪಿ: ಈ ಹಿಂದಿನಂತೆ ಸಮವಸ್ತ್ರದೊಂದಿಗೆ ಶಿರವಸ್ತ್ರ ಧರಿಸಿ ತರಗತಿಗೆ ಹಾಜರಾಗುವಂತೆ ವಿನಂತಿಸಿ ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಭಂಡರ್ಕಾರ್ಸ್ ಕಾಲೇಜಿನ ಸಂತ್ರಸ್ಥ ವಿದ್ಯಾರ್ಥಿನೀಯರು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರಿಗೆ ಮನವಿ ಸಲ್ಲಿಸಿದರು.

IMG 20220204 222318 Featured Story, Udupi

ನಾವು ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಕಾಲೇಜಿನ ಆರಂಭದಿಂದಲೇ ಸಮವಸ್ತ್ರದೊಂದಿಗೆ ನಮ್ಮ ಕಡ್ಡಾಯ ಸಂಪ್ರದಾಯದಂತೆ ಶಿರವಸ್ತ್ರ ಧರಿಸಿ ತರಗತಿಗೆ ಹಾಜರಾಗುತ್ತಿದ್ದೇವೆ.ಈ ಹಿಂದಿನ ವರ್ಷಗಳಲ್ಲೂ ವಿದ್ಯಾರ್ಥಿನೀಯರು ಶಿರವಸ್ತ್ರ ಧರಿಸಿಯೇ ತರಗತಿಗೆ ಹಾಜರಾಗಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ದಿನಾಂಕ 3/02/2022 ರಂದು ನಾವು ಸಮವಸ್ತ್ರದೊಂದಿಗೆ ಸಮವಸ್ತ್ರದ ಶಾಲನ್ನೇ ಶಿರವಸ್ತ್ರವನ್ನಾಗಿ ಧರಿಸಿ ಬಂದಿದ್ದೇವೆ. ಆದರೆ ಇದೀಗ ನಮಗೆ ಕಾಲೇಜಿನ ವಠಾರ ಪ್ರವೇಶಿಸದಂತೆ ತಡೆ ಹಿಡಿಯಲಾಗಿದೆ.

ವಾರ್ಷಿಕ ಪರೀಕ್ಷೆಗೆ ಎರಡು ತಿಂಗಳಿರುವ ಈ ಸಮಯದಲ್ಲಿ ಸಮಸ್ಯೆ ಸೃಷ್ಟಿಸಿರುವುದರಿಂದ ನಮ್ಮ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ದಯವಿಟ್ಟು ನಮಗೆ ಈ ಹಿಂದಿನಂತೆ ನಮ್ಮ ಕಡ್ಡಾಯ ಸಂಪ್ರದಾಯ ಮತ್ತು ಸಂವಿಧಾನ ಬದ್ಧ ಹಕ್ಕಾದ ಶಿವಸ್ತ್ರದೊಂದಿಗೆ ತರಗತಿಗೆ ಹಾಜರಾಗಲು ಅನುವುಮಾಡಿಕೊಡಬೇಕಾಗಿ ಮನವಿಯಲ್ಲಿ ವಿನಂತಿಸಿದ್ದಾರೆ.

Latest Indian news

Popular Stories