ಹಿಜಾಬ್ ಹಾಕದೆ ಬರಲು ಸಿದ್ಧವಿಲ್ಲ ಎಂದಾದರೆ ಕಾಲೇಜು ಕಾಂಪೌಂಡ್ ಒಳಗೆ ಬರಬೇಡಿ – ಶಾಸಕ ರಘುಪತಿ ಭಟ್

ಉಡುಪಿ: ಹಿಜಾಬ್ ಹಾಕದೆ ಬರಲು ಸಿದ್ಧವಿಲ್ಲ ಎಂದಾದರೆ ಕಾಲೇಜು ಕಾಂಪೌಂಡ್ ಒಳಗೆ ಬರಬೇಡಿ ಎಂದು ಶಾಸಕ ಮತ್ತು ಸರಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನ ಅಧ್ಯಕ್ಷ ರಘುಪತಿ ‌ಭಟ್ ಹೇಳಿಕೆ ನೀಡಿದ್ದಾರೆ.

ಇಂದು ಕಾಲೇಜು ಅಭಿವೃದ್ಧಿ ಸಮಿತಿ ಮತ್ತು ಪೋಷಕರನ್ನು ಒಳಗೊಂಡಂತೆ ಸಭೆ ನಡೆಸಲಾಗಿದೆ. ಹಿಜಾಬ್ ಬೇಕು ಎನ್ನುವ ವಿದ್ಯಾರ್ಥಿನೀಯರನ್ನು ಕರೆದಿದ್ದೇವೆ ಮತ್ತು ಅವರೊಂದಿಗೆ ಪೋಷಕರು ಬಂದಿದ್ದರು ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ನಮ್ಮ ಮಾತಿನಿಂದ ಅವರು ಸ್ವಲ್ಪ ಮಟ್ಟಿಗೆ ಒಪ್ಪಿಕೊಂಡಿದ್ದಾರೆ ಎಂದರು. ನಾಳೆ ಅವರ ಮನೆಯವರೊಂದಿಗೆ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಈ ಮುಂಚೆ ಬಂದ ಹಾಗೆ ಕಾಂಪೌಂಡ್ ಒಳಗೆ ಹಿಜಾಬ್ ಧರಿಸಿ ಬಂದು ತರಗತಿಯಲ್ಲಿ ಹಿಜಾಬ್ ತೆಗೆದು ಕುಳಿತುಕೊಳ್ಳಬೇಕು ಎಂದು ಹೇಳಿದರು. ಸರಕಾರದ ಸಮಿತಿ ನಿರ್ಧಾರ ಆಗುವರೆಗೆ ಕಾಯಬೇಕು ಎಂದು ಹೇಳಿದರು.

ಹಿಜಾಬ್ ಹಾಕದೆ ತರಗತಿಯೊಳಗೆ ಬರುತ್ತೇವೆ ಎಂದು ನಿರ್ಧಾರ ಮಾಡಿಕೊಂಡಿದ್ದಾರೆ‌ಮಾತ್ರ ಬನ್ನಿ ಇಲ್ಲದಿದ್ದರೆ ಕಾಂಪೌಂಡ್ ಒಳಗೆ ಬರುವುದು ಬೇಡ. ಈಗಾಗಲೇ ಪೊಲೀಸ್ ಇಲಾಖೆಗೆ ಈ ಕುರಿತು ತಿಳಿಸಿದ್ದೇವೆ. ಕಾಲೇಜಿನ ಮಕ್ಕಳನ್ನು ಬಿಟ್ಟು ಯಾರಿಗೂ ಅವಕಾಶ ಕಲ್ಪಿಸಬಾರದು. ಯಾವುದೇ ಕಾರಣಕ್ಕೂ ಕಲಿಯುವ ಒಂದು ಸಾವಿರ ಮಕ್ಕಳಿಗೆ ಸಮಸ್ಯೆಯಾಗಬಾರದೆಂದು ಹೇಳಿದರು.

Latest Indian news

Popular Stories