ಹೆಸರಾಂತ ಹಾಸ್ಯ ನಟ, ನಿರ್ಮಾಪಕ ಕರ್ನಾಟಕದ ಕುಳ್ಳ ದ್ವಾರಕೀಶ್ (81 ) ನಿಧನರಾಗಿದ್ದಾರೆ.
ಡಾ ರಾಜ್ ಕುಮಾರ್ , ವಿಷ್ಣುವರ್ಧನ್.
ಶಂಕರ್ ನಾಗ್ ಸೇರಿ ಅನೇಕರ ಜೊತೆ ನಟಿಸಿದ್ದ ದ್ವಾರಕೀಶ್ ಅವರು ಆಪ್ತ ಮಿತ್ರ ಸೇರಿದಂತೆ ಅನೇಕ ಚಿತ್ರಗಳ ನಿರ್ಮಾಪಕರಾಗಿದ್ದರು. 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.
ಇಂದಿನ ರಾಮಾಯಣ, ಸಿಂಗಾಪುರದಲ್ಲಿ ರಾಜಾ ಕುಳ್ಳ, ಗುರು ಶಿಷ್ಯರು,ಮೇಯರ್ ಮುತ್ತಣ್ಣ ಅದೃಷ್ಟವಂತ, ಆಪ್ತ ಮಿತ್ರ,ಭಾಗ್ಯವಂತ,
ಪ್ರಚಂಡ ಕುಳ್ಳ, ನೀ ಬರೆದ ಕಾದಂಬರಿ, ಡಾನ್ಸ್ ರಾಜ ಡಾನ್ಸ್, ಆಫ್ರಿಕದಲ್ಲಿ ಶೀಲಾ, ಹೃದಯ ಕಳ್ಳರು, ಚೌಕ, ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಕರ್ನಾಟಕದ ಕುಳ್ಳ ದಲ್ಲಿ ನಟಿಸಿದ್ದರು.
ಹುಣಸೂರು ಮೂಲದ ದ್ವಾರಕೀಶ್ ಕನ್ನಡದ ಹಾಸ್ಯ ಲೋಕಕ್ಕೆ ಮೆರಗು ತಂದವರು.