ಕೊಡಗು: ಗುಂಡು ಹಾರಿಸಿ ಕೊಲೆ ಯತ್ನ ತಪ್ಪಿದ ಅನಾಹುತ – ನಾಯಿಗೆ ತಗುಲಿದ ಗುಂಡು

ಗೋಣಿಕೊಪ್ಪಲಿನ ಉದ್ಯಮಿ ಅನೀಶ್ ಮಾದಪ್ಪ ಅವರ ಮನೆಯ ಅಂಗಳದಲ್ಲಿ ಸೈಕಲಿಂಗ್ ಮಾಡುತ್ತ ಪುತ್ರ ಆಯುಷ್ ಆಟವಾಡುತ್ತಿದ್ದ ವೇಳೆ ಗುಂಡು ಹಾರಿಸಿರುವ ಪ್ರಕರಣ ಸಂಬಂಧಿಸಿದಂತೆ ದೂರುದಾರರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.
ಗುಂಡು ತಪ್ಪಿ ಗೂಡಿನಲ್ಲಿದ್ದ ನಾಯಿಗಳಿಗೆ ತಗುಲಿದ ಪರಿಣಾಮ 3 ನಾಯಿಗಳಿಗೆ ಗಂಭೀರ ಗಾಯವಾಗಿದೆ ಎಂದು ದೂರದಾರರು ತಿಳಿಸಿದ್ದಾರೆ.


ಪ್ರಕರಣ ನಡೆದು 5 ತಾಸುಗಳ ನಂತರ ಒಂದು ನಾಯಿ ಮೃತಪಟ್ಟಿದ್ದು ಉಳಿದ ಎರಡು ನಾಯಿಗಳು ಗಂಭೀರ ಸ್ಥಿತಿಯಲ್ಲಿವೆ ಎಂದು ಹೇಳಲಾಗಿದೆ.


ಶ್ರೀಮಂಗಲ ಠಾಣೆಯಲ್ಲಿ ಪೊಲೀಸ್ ದೂರು ದಾಖಲಾಗಿದ್ದು , ತಮ್ಮ ನೆರೆಮನೆಯ ಎ.ಟಿ.ಸೋಮಣ್ಣ ವಿರುದ್ಧ ಕೊಲೆ ಪ್ರಯತ್ನದ ದೂರನ್ನು ದಾಖಲಿಸಿಕೊಂಡಿರುವ ಶ್ರೀಮಂಗಲ ಪೊಲೀಸರು ಆರೋಪಿಯ ಪತ್ತೆಗಾಗಿ ಶೋದ ನಡೆಸುತ್ತಿದ್ದಾರೆ.

Latest Indian news

Popular Stories