ಸುಳ್ಯ: ಟಿಪ್ಪರ್’ನಿಂದ ಜಾರಿದ ಮರದ ದಿಮ್ಮಿ – ವ್ಯಕ್ತಿ ‌ಮೃತ್ಯು

ಸುಳ್ಯ, ಜೂ.6: ಟಿಪ್ಪರ್‌ನಿಂದ ಜಾರಿಬಿದ್ದ ಮರದ ದಿಮ್ಮಿಗಳು ವ್ಯಕ್ತಿಯೊಬ್ಬನ ಮೇಲೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಪಡುವನ್ನೂರು ಗ್ರಾಮದ ಸುಳ್ಯ ಪದವು ಬಟ್ಟಂಗಲದಲ್ಲಿ ಈ ದಾರುಣ ಘಟನೆ ನಡೆದಿದೆ.

ಗೋಪಾಲಕೃಷ್ಣ ಈ ದುರಂತಕ್ಕೆ ಬಲಿಯಾದ ದುರ್ದೈವಿ. ಗೋಪಾಲಕೃಷ್ಣ ಎಂಬುವವರ ಮನೆ ಬಳಿ ಕ್ರೇನ್ ಮೂಲಕ ಮಾವಿನ ಮರಗಳ ಮರದ ದಿಮ್ಮಿಗಳನ್ನು ಟಿಪ್ಪರ್‌ಗೆ ತುಂಬಿಸಲಾಗುತ್ತಿತ್ತು. ಈತ ಕೂಡ ಇತರ ಕೂಲಿ ಕಾರ್ಮಿಕರೊಂದಿಗೆ ಕೆಲಸ ಮಾಡುತ್ತಿದ್ದ. ಟಿಪ್ಪರ್ ಲಾರಿಯ ಹಿಂಬಾಗಿಲು ಬಿಗಿಯುತ್ತಿದ್ದಂತೆ ಮರದ ದಿಮ್ಮಿಗಳು ಜಾರಿ ಗೋಪಾಲಕೃಷ್ಣ ಮೇಲೆ ಬಿದ್ದಿವೆ. ಗಂಭೀರವಾಗಿ ಗಾಯಗೊಂಡಿದ್ದ ಗೋಪಾಲಕೃಷ್ಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.

ಗೋಪಾಲಕೃಷ್ಣ ಅವರು ಶ್ರೀ ಶೈಲಂ ಶಾಮಿಯಾನದ ಮಾಲೀಕರಾಗಿದ್ದು, ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ತಾಯಿ, ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಗೋಪಾಲಕೃಷ್ಣ ಸಾವಿಗೆ ಟಿಪ್ಪರ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

Latest Indian news

Popular Stories