ಕೆನಡಾ: ಭಾರತ ಮತ್ತು ಕೆನಾಡದ ನಡುವಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಳಿಸುತ್ತಿದ್ದು ಇದೀಗ ಹತ್ಯೆಯ ವಿವರವನ್ನು ಒಂದು ವಾರದ ಮೊದಲು ಭಾರತದೊಂದಿಗೆ ಹಂಚಿಕೊಂಡಿರುವ ಬಗ್ಗೆ ತಿಳಿಸಿದ್ದಾರೆ.
ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯಲ್ಲಿ ಭಾರತದ ಸರ್ಕಾರಿ ಏಜೆಂಟರು ಸಮರ್ಥವಾಗಿ ಭಾಗಿಯಾಗಿದ್ದಾರೆ ಎಂಬ “ನಂಬಲರ್ಹ ಸಾಕ್ಷಿ”ಯನ್ನು ಕೆನಡಾವು ವಾರಗಳ ಹಿಂದೆ ನವದೆಹಲಿಯೊಂದಿಗೆ ಹಂಚಿಕೊಂಡಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಶುಕ್ರವಾರ ಹೇಳಿದ್ದಾರೆ.
“ನಾನು ಸೋಮವಾರ ಮಾತನಾಡಿದ ಆರೋಪಗಳ ಬಗ್ಗೆ ಕೆನಡಾ ಭಾರತದೊಂದಿಗೆ ಹಂಚಿಕೊಂಡಿದೆ. ನಾವು ಅದನ್ನು ಹಲವು ವಾರಗಳ ಹಿಂದೆ ಮಾಡಿದ್ದೇವೆ” ಎಂದು ಒಟ್ಟಾವಾದಲ್ಲಿ ಸುದ್ದಿಗೋಷ್ಠಿಯಲ್ಲಿ ಟ್ರುಡೊ ಹೇಳಿದರು. “ಭಾರತದೊಂದಿಗೆ ರಚನಾತ್ಮಕವಾಗಿ ಕೆಲಸ ಮಾಡಲು ನಾವು ಅಲ್ಲಿದ್ದೇವೆ. ಅವರು ನಮ್ಮೊಂದಿಗೆ ತೊಡಗಿಸಿಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ, ಇದರಿಂದ ನಾವು ಈ ವಿಷಯದ ಆಳದವರೆಗೆ ಹೋಗಿ ತನಿಖೆ ಮಾಡಬಹುದು” ಎಂದಿದ್ದಾರೆ.
“ನಿಜ್ಜರ್ ಹತ್ಯೆಯಲ್ಲಿ ಭಾರತ ಸರಕಾರದ ಏಜೆಂಟ್ಗಳ ಕೈವಾಡವಿದೆ ಎಂಬ ಆರೋಪವನ್ನು ನಂಬಲು ವಿಶ್ವಾಸಾರ್ಹ ಕಾರಣಗಳಿವೆ’ ಎಂದಿದ್ದಾರೆ. ಜತೆಗೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಪಾರದರ್ಶಕ ತನಿಖೆಗೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ ಭಾರತ ಸರಕಾರ ನಮ್ಮ ಜತೆ ಕೈಜೋಡಿಸಬೇಕು ಎಂದೂ ಟ್ರುಡೊ ಮನವಿ ಮಾಡಿದ್ದಾರೆ. ಆದರೆ ಭಾರತದ ವಿರುದ್ಧ ಅವರ ಆರೋಪಕ್ಕೆ ಸಾಕ್ಷ್ಯ ನೀಡಲು ನಿರಾಕರಿಸಿದ್ದಾರೆ.
ಎರಡು ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾದ ಬಳಿಕ ಆ ದೇಶದಲ್ಲಿನ ರಹಸ್ಯಗಳ ಬಗ್ಗೆ ದಿನ ಕಳೆದಂತೆ ಹೊಸ ಮಾಹಿತಿ ಬಹಿರಂಗ ವಾಗತೊಡಗಿದೆ. ಕಿಡಿಗೇಡಿತನದ ಕೃತ್ಯಗಳಿಗೆ ಆಡಳಿತಾರೂಢ ಲಿಬರಲ್ ಪಾರ್ಟಿ ಆಫ್ ಕೆನಡಾದ ನಾಯಕ ಬಿಲಾಲ್ ಚೀಮಾ ಬಹಿರಂಗವಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದೂ ಆರೋಪಿಸಲಾಗಿದೆ.
ಕೆನಡಾದಲ್ಲಿ ವಲಸೆ ಕೂಟವೊಂದು ಸಕ್ರಿಯವಾಗಿದ್ದು, ಅದು ಭಾರತೀಯ ಯುವಕರನ್ನು ಗ್ಯಾಂಗಸ್ಟರ್ಗಳೊಂದಿಗೆ ಸೇರುವಂತೆ, ಡ್ರಗ್ಸ್ ವಹಿವಾಟಿನಲ್ಲಿ ಭಾಗಿಯಾಗುವಂತೆ ಅಥವಾ ಭಾರತ-ವಿರೋಧಿ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವಂತೆ ಒತ್ತಡ ಹೇರುತ್ತಿದೆ. ಅಷ್ಟೇ ಅಲ್ಲ, ಪಂಜಾಬ್ನ ಯುವತಿ ಯರನ್ನು ವೇಶ್ಯಾವಾಟಿಕೆಗೆ ತಳ್ಳುವ ಕೆಲಸವನ್ನೂ ಮಾಡುತ್ತಿದೆ ಎಂದು ಗುಪ್ತಚರ ಮೂಲಗಳು ಆರೋಪಿಸಿವೆ.