ಜೂನ.25 ರಂದು ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಬೀದರ ಜೂನ.24 (ಕರ್ನಾಟಕ ವಾರ್ತೆ) ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಜೂನ.25 ರಂದು ಬೀದರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಜೂನ.25 ರಂದು ಬೆಳಿಗ್ಗೆ 9ಕ್ಕೆ ಬೋಂತಿ ತಾಂಡಾದಿಂದ ನಿರ್ಗಮಿಸಿ 9.30ಕ್ಕೆ ಬಾವಲಗಾಂವ್ ತಾಂಡಾ, 10ಕ್ಕೆ ಬಿಜಲಗಾಂವ್, 10.30ಕ್ಕೆ ದಾಬಕಾ(ಸಿ), 11ಕ್ಕೆ ಕಿಶನ್ ನಾಯಕ್ ತಾಂಡಾ, 11.30ಕ್ಕೆ ಹಂದಿಕೇರಾ ಗ್ರಾಮ, 12ಕ್ಕೆ ಖತಗಾಂವ್ ಗ್ರಾಮ, 12.30ಕ್ಕೆ ಮದನೂರ ಗ್ರಾಮ, 1ಕ್ಕೆ ಹೊರಂಡಿ ಗ್ರಾಮ, 2.15ಕ್ಕೆ ಕೊಟಗ್ಯಾಳ ಗ್ರಾಮ, 2.45ಕ್ಕೆ ತೋರ್ಣಾ ವಾಡಿ, 3.15ಕ್ಕೆ ಬೇಡಕುಂದಾ ಗ್ರಾಮ, 3.45ಕ್ಕೆ ಕೋರೆಕಲ್ ಗ್ರಾಮ, 4.15ಕ್ಕೆ ಡೊಂಗರಗಾಂವ ಕ್ರಾಸ್ ಇಲ್ಲಿ ನಡೆಯುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಹಾಗೂ 5.45ಕ್ಕೆ ರಸ್ತೆ ಮೂಲಕ ಬೋಂತಿ ತಾಂಡಾಕ್ಕೆ ಪ್ರಯಾಣ ಬೆಳೆಸಿ ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿಯಾದ ಶಿವಕುಮಾರ ಕಟ್ಟೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories