ಕಾರವಾರ: ಪತಿ ಪತ್ನಿ ಜಗಳದಲ್ಲಿ ಮಗು ತನ್ನ ಪ್ರಾಣ ಕಳೆದುಕೊಂಡ ಘಟನೆ ದಾಂಡೇಲಿ ಹಾಲಮಡ್ಡಿಯಲ್ಲಿ ನಡೆದಿದೆ.
ಹಾಲಮಡ್ಡಿಯ ಬಾಡಿಗೆ ಮನೆಯಲ್ಲಿ ರವಿಕುಮಾರ್ ಶೆಳ್ಳೆ ಹಾಗೂ ಸಾವಿತ್ರಿ ವಾಸವಿದ್ದು , ಇವರ ಮಧ್ಯೆ ಜಗಳವಾಗಿದೆ. ಪತಿಯ ಮೇಲಿನ ಕೋಪಕ್ಕೆ ಮಗುವನ್ನು ಸಾವಿತ್ರಿ ಹಾಲಮಡ್ಡಿ ನಾಲೆಗೆ ಎಸೆದಿದ್ದಳು ಎನ್ನಲಾಗಿದೆ. ವಿನೋದ(6) ಎಂಬ ಬಾಲಕ ನಾಲೆಗೆ ಎಸೆದ ಪರಿಣಾಮ ಸಾವನ್ನಪ್ಪಿದ್ದಾನೆ. ಹಾಲಮಡ್ಡಿ ನಾಲಾದಲ್ಲಿ ಮೊಸಳೆಗಳು ಹೆಚ್ಚಾಗಿವೆ ಎಂದು ಹೇಳಲಾಗಿದೆ. ಪೊಲೀಸರು, ಜಂಗಲ್ ಲಾಡ್ಜ ಸಿಬ್ಬಂದಿ, ಮುಳುಗು ತಜ್ಞರು ಮಗುವಿಗೆ ಹುಡುಕಾಟ ನಡೆಸಿದಾಗ,ಮಗು ಶವ ಪತ್ತೆಯಾಗಿದೆ. ಮಗುವನ್ನು ನಾಲೆಗೆ ಎಸೆದದ್ದಾಗಿ ತಾಯಿ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ. ಇದರ ಸತ್ಯಾಸತ್ಯತೆ ತನಿಖೆಯಿಂದ ನಿಖರವಾಗಬೇಕಿದೆ. ದಾಂಡೇಲಿಯಲ್ಲಿ ಈ ಘಟನೆ ಜನತೆಯನ್ನು ಬೆಚ್ಚಿ ಬೀಳಿಸಿದೆ. ಪೋಲೀಸರು ಘಟನೆಯ ನಿಜಾಂಶವನ್ನು ಪರಿಶೀಲಿಸುತ್ತಿದ್ದಾರೆ.
…