ಕಾರವಾರ : ಕಾಂಗ್ರೆಸ್ ಪದಾಧಿಕಾರಿ ದೀಪಕ್ ದೊಡ್ಡೂರು ಹಾಗೂ ಉದ್ಯಮಿ ಅನಿಲ್ ಮುಷ್ಟಗಿ, ಶಿವರಾಮ ಹೆಗಡೆ ಅವರ ಮನೆಯ ಮೇಲೆ ಐಟಿ ಅಧಿಕಾರಿಗಳಿಂದ ದಾಳಿ ಮಾಡಿಸುವ ಮೂಲಕ ಬಿಜೆಪಿ ತನ್ನ ಹಳೆಯ ಚಾಳಿ ಮುಂದುರಿಸಿದೆ.
ಐಟಿ ಅಧಿಕಾರಿಗಳ ತಂಡ ಇಂದು ಬೆಳಿಗ್ಗೆ ದೀಪಕ್ ದೊಡ್ಡೂರು ಅವರ ಉದ್ಯಮದ ಪಾರ್ಟನರ್ ಶಿವರಾಮ ಹೆಗಡೆ, ಉದ್ಯಮಿ ಅನಿಲ್ ಮನೆ ಹಾಗೂ ಕಚೇರಿಯ ಮೇಲೆ ದಾಳಿ ಮಾಡಿರುವ ಐಟಿ ಅಧಿಕಾರಿಗಳ ತಂಡ ವ್ಯವಹಾರ ಪರಿಶೀಲಿಸುತ್ತಿದೆ. ಚುನಾವಣಾ ಸಮಯವಾದ ಕಾರಣ ಹಣ ಏನಾದರೂ ಸಿಗಬಹುದು ಎಂದು ಪರಿಶೀಲನೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಬೆಂಬಲಿತರ ಇನ್ನೂ ಮೂವರ ಮನೆಯಲ್ಲಿ ಐಟಿ ಪರಿಶೀಲನೆ ನಡೆಯುತ್ತಿದೆ ಎನ್ನಲಾಗಿದೆ. ದೀಪಕ್ ದೊಡ್ಡೂರು ಮನೆಗೆ ಸಾರ್ವಜನಿಕರ ಆಗಮನಕ್ಕೆ ನಿರ್ಬಂಧ ಹೇರಲಾಗಿದೆ .