ಬೆಂಗಳೂರು: ಶಾಂತಿ ಕದಡುವ ಅಥವಾ ಕಾನೂನಿಗೆ ವಿರುದ್ಧವಾಗಿರುವ ಯಾರೊಬ್ಬರ ವಿರುದ್ಧ ಕ್ರಮವನ್ನು ನಾವು ವಿರೋಧಿಸುವುದಿಲ್ಲ. ಆರ್ಎಸ್ಎಸ್ ಮತ್ತು ಇತರರು ಸಹ ಇದೇ ರೀತಿ ಶಾಂತಿ ಕದಡುತ್ತಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು, ಅಂತಹ ಯಾವುದೇ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದರು.
ಕೇಂದ್ರ ಬಿಜೆಪಿ ಸರಕಾರ ಪಿ.ಎಫ್.ಐ ಸಂಘಟನೆಯನ್ನು ವಿರೋಧಿಸಿದ ನಂತರ ಇದೀಗ ವಿರೋಧ ಪಕ್ಷಗಳು ಆರ್.ಎಸ್.ಎಸ್ನಿಷೇಧಕ್ಕೆ ಆಗ್ರಹಿಸುತ್ತಿದೆ.