ಕೊಡಗು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರ ಮೇಲೆ ಗುಂಡಿನ ದಾಳಿ

ಮಡಿಕೇರಿಯ (Madikeri) ವಕೀಲರು , ವಿಶ್ವ ಹಿಂದೂ ಪರಿಷತ್ (VHP) ಅಧ್ಯಕ್ಷ ಕೃಷ್ಣ ಮೂರ್ತಿ ಮೇಲೆ ನಿನ್ನೆ ರಾತ್ರಿ 11.30 ಗಂಟೆಗೆ ಚೆಟ್ಟಲ್ಲಿ ಹತ್ತಿರದ ಅಭ್ಯಾಲ ಬಳಿ ಗುಂಡಿನ ದಾಳಿ ನಡೆದಿದೆ.

ಕೃಷ್ಣಮೂರ್ತಿ ಚಲಿಸುತ್ತಿದ್ದ ಕಾರಿಗೆ ಗುಂಡು ತಗುಲಿದ ಕುರಿತು ವರದಿಯಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ‌.

Latest Indian news

Popular Stories