ಆದ್ಯತಾ ವಲಯದವರಿಗೆ ವ್ಯಾಕ್ಸಿನ್ ನೀಡಲು ಪಟ್ಟಿ ನೀಡಿ: ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್

ರಾಯಚೂರು, ಜೂ.೦೨(ಕ.ವಾ):- ಪ್ರಸ್ತುತ ಕೋವಿಡ್ ವ್ಯಾಕ್ಸಿನ್ ನೀಡಲು ಗುರುತಿಸಲಾಗಿರುವ ಆದ್ಯತಾ ವಲಯದ ಗುಂಪಿನಲ್ಲಿ ಬರುವ ೧೮ ರಿಂದ ೪೪ ವರ್ಷದೊಳಗಿನ ಫಲಾನುಭವಿಗಳಿಗೆ ಆಂದೋಲನದ ಮಾದರಿಯಲ್ಲಿ ಚುಚ್ಚುಮದ್ದು ನೀಡಲು ಕೂಡಲೇ ಪಟ್ಟಿ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ಸಂಬAಧಿಸಿದ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಆದ್ಯತಾ ವಲಯದ ಫಲಾನುಭವಿಗಳಿಗೆ ಲಸಿಕಾಕರಣ ಕುರಿತಂತೆ ಅವರು ಜೂ.೨ರ ಬುಧವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಈಗ ಗುರುತಿಸಲಾಗಿರುವ ಆದ್ಯತಾ ವಲಯದ ಗುಂಪಿನವರು, ವಿವಿಧ ರೀತಿಯ ವ್ಯವಹಾರಗಳ ಸಂದರ್ಭಗಳಲ್ಲಿ ಜನ ಸಾಮಾನ್ಯರೊಂದಿಗೆ ನೇರ ಸಂಪರ್ಕಕ್ಕೆ ಬರುತ್ತಾರೆ, ಅವರೊಂದಿಗೆ ವ್ಯವಹರಿಸುವ ಸಮಯದಲ್ಲಿ ಕೋವಿಡ್ ಪ್ರಸಾರವಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ, ಹಾಗಾಗಿ ಸರ್ಕಾರ ಅವರೆಲ್ಲರಿಗೂ ಆದ್ಯತೆಯ ಮೇರೆಗೆ ಕೋವಿಡ್ ವ್ಯಾಕ್ಸಿನ್ ನೀಡುವಂತೆ ನಿರ್ದೇಶನ ನೀಡಿದ್ದು, ಇಂಜೆಕ್ಷನ್‌ಗಳನ್ನು ಪೂರೈಸುತ್ತಿದೆ, ಜಿಲ್ಲೆಗೆ ೧೦ ಸಾವಿರ ವೈಲ್ಸ್ ಕೋವಿಡ್ ವ್ಯಾಕ್ಸಿನ್‌ಗಳು ಬಂದಿದ್ದು, ಕೂಡಲೇ ವಿಕಲಚೇತನ, ಆಹಾರ ಮತ್ತು ನಾಗರೀಕ ಪೂರೈಕೆ, ಕೃಷಿ, ತೋಟಗಾರಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು, ಬ್ಯಾಂಕುಗಳು, ಸಾರಿಗೆ, ಜೆಸ್ಕಾಂ, ಕಾರ್ಮಿಕ ಇಲಾಖೆ, ಕಟ್ಟಡ ನಿರ್ಮಾಣ ಕಾರ್ಯ ನಿರ್ವಹಿಸುವವರು, ಕಿರಾಣ  ಅಂಗಡಿ ಕೆಲಸಗಾರರು, ಅದರ ಮಾಲೀಕರು ಸೇರಿದಂತೆ ನೇರವಾಗಿ ಸಾರ್ವಜನಿಕರ ಸಂಪರ್ಕಕ್ಕೆ ಬರುವರ ಪಟ್ಟಿಯನ್ನು ಕೂಡಲೇ ಒದಗಿಸಬೇಕು ಎಂದರು.  

ಬಾರ್ ಅಸೋಸಿಯೇಷನ್ ಸದಸ್ಯರು, ಹಮಾಲರು, ಹಾಲು ಸಹಕಾರ ಸಂಘಗಳ ಸಿಬ್ಬಂದಿಗಳು, ಪ್ರಾಥಮಿಕ ಕೃಷಿ ಸಹಕಾರ ಸೊಸೈಟಿಗಳು, ಕೇಬಲ್ ಆಪರೇಟರ್‌ಗಳು, ಬಿಎಸ್‌ಎನ್‌ಎಲ್ ಸೇರಿದಂತೆ ಎಲ್ಲಾ ಖಾಸಗಿ ಟೆಲಿಕಾಂ ಸಿಬ್ಬಂದಿಗಳು, ಇಂಟರ್‌ನೆಟ್ ಸೇವಾದಾರರು, ಆಟೋ ಡ್ರೆöÊವರ್‌ಗಳು ಸೇರಿದಂತೆ ಆದ್ಯತಾ ವಲಯಕ್ಕೆ ಬರುವವರ ಪಟ್ಟಿ ಒದಗಿಸಿ, ಅದರಂತೆ ಅವರೆಲ್ಲರಿಗೂ ವ್ಯಾಕ್ಸಿನ್ ಕೊಡಿಸಬೇಕು ಎಂದರು. 

ಇವರೆಲ್ಲರಿಗೂ ಇಂಜೆಕ್ಷನ್ ಕೊಡಿಸಲು ಮೊದಲು ಉತ್ತಮ ಯೋಜನೆಯೊಂದನ್ನು ರೂಪಿಸಿಕೊಳ್ಳಬೇಕು, ಸಾಧ್ಯವಾದಷ್ಟು ಜನರನ್ನು ಒಗ್ಗೂಡಿಸಿಕೊಂಡು ನಗರ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆ ಅಥವಾ ದೊಡ್ಡ ಸಮುದಾಯ ಭವನಗಳು ಅಥವಾ ದೊಡ್ಡ ಶಾಲೆ, ಕಾಲೇಜುಗಳಲ್ಲಿ ಆರ್‌ಸಿಎಚ್ ಅಧಿಕಾರಿಗಳ ಸಮನ್ವಯದೊಂದಿಗೆ ಅವರಿಗೆ ವ್ಯಾಕ್ಸಿನ್ ಕೊಡಿಸಬೇಕು ಎಂದು ಸೂಚಿಸಿದರು. 

ಮೊದಲಿಗೆ ಇವರೆಲ್ಲರಿಗೂ ಕೋವಿಡ್ ವ್ಯಾಕ್ಸಿನ್ ಕೊಡಿಸಿದ್ದಲ್ಲೀ ಸೋಂಕಿನ ಸರಪಳಿಯನ್ನು ತುಂಡರಿಸಬಹುದು, ಇಲ್ಲದಿದ್ದಲ್ಲೀ ಇವರು ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ ಮುಟ್ಟುವುದು ಅಥವಾ ಹಣ ನೀಡುವಾಗ ಮತ್ತು ಪಡೆಯುವ ಸಂದರ್ಭಗಳಲ್ಲಿ ಸೋಂಕು ಹರಡಬಹುದು ಆದ ಕಾರಣ ಈ ಆದ್ಯತಾ ವಲಯದವರಿಗೆ ಕೂಡಲೇ ವ್ಯಾಕ್ಸಿನ್ ಕೊಡಿಸಬೇಕು, ಏನೇ ಸಮಸ್ಯೆಗಳಿದ್ದರೂ ನೋಡಲ್ ಅಧಿಕಾರಿಯಾದ ಎಡಿಸಿ ದುರುಗೇಶ್ ಹಾಗೂ ಆರ್‌ಸಿಎಚ್ ಅಧಿಕಾರಿ ಡಾ. ವಿಜಯ ಅವರನ್ನು ಸಂಪರ್ಕಿಸಬೇಕು ಎಂದು ನುಡಿದರು. 

ಅಪರ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ್, ಆರ್‌ಸಿಎಚ್ ಅಧಿಕಾರಿ ಡಾ. ವಿಜಯ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಮಲ್ಲಿಕಾರ್ಜುನ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮೊಹಮ್ಮದ ಅಲಿ, ಆಹಾರ ಮತ್ತು ನಾಗರೀಕರ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಅರುಣ್ ಕುಮಾರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಬಾಬು ಬಳಗಾನೂರು, ಡಿಡಿಪಿಯು, ಡಿಡಿಪಿಐ ಸೇರಿದಂತೆ ಸಂಬAಧಿಸಿದ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿದ್ದರು. 

ಸಂಕಷ್ಟಕ್ಕೀಡಾದ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಪರಿಹಾರ ಧನ ಘೋಷಣೆ
ರಾಯಚೂರು, ಜೂ.೦೨(ಕ.ವಾ):- ಕೋವಿಡ್-೧೯ರ ೨ನೇ ಅಲೆಯ ಕಾರಣದಿಂದ ರಾಜ್ಯದಲ್ಲಿ ಲಾಕ್ ಡೌನ್ ಜಾರಿಮಾಡಲಾಗಿದೆ, ಈ ಅವಧಿಯಲ್ಲಿ ರಾಜ್ಯದ ಜೊತೆಗೆ ಹೊರ ರಾಜ್ಯಗಳಲ್ಲಿ ಸಹ ಮಾರಾಟವಾಗುವ ಹೂ, ಹಣ್ಣು ಮತ್ತು ತರಕಾರಿ ಬೆಳೆಗಳ ಪ್ರಮಾಣ ಹಾಗೂ ದರದಲ್ಲಿ ಕುಂಠಿತವಾಗಿದೆ.
ದೇವಾಲಯಗಳು ಮುಚ್ಚಿದ್ದು, ಮದುವೆ, ಸಭೆ ಸಮಾರಂಭಗಳು ಹಾಗೂ ಮತ್ತಿತರೆ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ್ದರಿಂದ ಹೂವು, ಹಣ್ಣು, ಮತ್ತು ತರಕಾರಿಗಳಿಗೆ ಬೇಡಿಕೆ ಕುಸಿತವಾಗಿ ಸೂಕ್ತ ಬೆಲೆ ದೊರಕದೆ ರೈತರು ನಷ್ಟಕ್ಕೆ ಸಿಲುಕಿದ್ದಾರೆ. ಸಂಕಷ್ಟಕ್ಕೀಡಾಗಿರುವ ರೈತರಿಗೆ ರಾಜ್ಯ ಸರಕಾರ ತೋಟಗಾರಿಕೆ ಇಲಾಖೆಯ ಮೂಲಕ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪರಿಹಾರ ಧನ ಒದಗಿಸಿರುತ್ತದೆ.
ಬೆಳೆ ಸಮೀಕ್ಷೆ ೨೦೨೦ರ ಹಿಂಗಾರು ಹಂಗಾಮಿನ ಅನಲೈನ್‌ನಲ್ಲಿ ಅಳವಡಿಸಿದ ಹೂವಿನ ಬೆಳೆಗಳಾದ ಗುಲಾಬಿ, ದುಂಡು ಮಲ್ಲಿಗೆ, ಕಾಕಡ ಮಲ್ಲಿಗೆ, ಕನಕಾಂಬರ, ತರಕಾರಿ ಬೆಳೆ ನುಗ್ಗೆ, ಹಣ ್ಣನ ಬೆಳೆಗಳಾದ ಮಾವು, ಚಿಕ್ಕು, ಅಂಜುರ, ಕಲಂಗಡಿ, ಕರಬುಜಾ, ದಾಳಿಂಬೆ, ಪೇರಲ, ನಿಂಬೆ, ಮೊಸಂಬಿ, ದ್ರಾಕ್ಷಿ ಹಣ್ಣು, ಪಪ್ಪಾಯ ಮತ್ತು ಬಾಳೆ ಬೆಳೆದ ರೈತರಿಗೆ ಗರಿಷ್ಟ ಒಂದು ಹೆಕ್ಟರ್‌ಗೆ ಮಿತಿಗೊಳಿಸಿ ಗರಿಷ್ಟ ೧೦,೦೦೦ ರೂ.ಗಳ ಪರಿಹಾರ ಧನವನ್ನು ನೇರವಾಗಿ ರೈತರ ಖಾತೆಗಳಿಗೆ ಜಮೆ ಮಾಡಲು ಕ್ರಮಕೈಗೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗೆ ಹತ್ತಿರದ ತೋಟಗಾರಿಕೆ ಇಲಾಖೆಯ ಕಚೇರಿಗಳನ್ನು ಸಂಪರ್ಕಿಸಿ ಯೋಜನೆಯ ಲಾಭ ಪಡೆಯುವಂತೆ ತೋಟಗಾರಿಕೆಯ ಇಲಾಖೆಯ ಉಪ ನಿರ್ದೇಶಕ ಮೊಹಮ್ಮದ್ ಅಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories