ಸಾಲಿಡಾರಿಟಿ ಉಡುಪಿ ಜಿಲ್ಲೆ ಮತ್ತು ಉಮರ್ ಖತ್ತಾಬ್ ಮಸೀದಿ, ಕುಕ್ಕಿಕಟ್ಟೆ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ

ಹೂಡೆ: ಸಾಲಿಡಾರಿಟಿ ಯೂತ್’ಮೂವ್ಮೆಂಟ್, ಉಡುಪಿ ಜಿಲ್ಲೆ, ಎಚ್.ಆರ್.ಎಸ್ ಉಡುಪಿ ಮತ್ತು ಶ್ರೀಹರಿ ನೇತ್ರಾಲಯ ಮತ್ತು ಕುಕ್ಕಿಕಟ್ಟೆ ಇಂದಿರಾ ನಗರದ ಉಮರ್ ಖತ್ತಾಬ್ ಮಸೀದಿಯ ಸಹಯೋಗದೊಂದಿಗೆ ಮಸೀದಿ ವಠಾರದಲ್ಲಿ ಉಚಿತ ನೇತ್ರಾ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

IMG 20231126 WA0019 Udupi, PRESS RELEASE / ORGANISATIONS IMG 20231126 WA0016 Udupi, PRESS RELEASE / ORGANISATIONS IMG 20231126 WA0022 Udupi, PRESS RELEASE / ORGANISATIONS

ಉಚಿತ ನೇತ್ರಾ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ, ಶ್ರೀಹರಿ ನೇತ್ರಾಲಯದ ತಜ್ಞ ವೈದ್ಯ ಡಾ.ಹರಿಪ್ರಸಾದ್ ಒಕ್ಕೂಡ ಮಾತನಾಡಿ ಕಣ್ಣು ದೇವನ ಅತೀ ದೊಡ್ಡ ಕೊಡುಗೆಯಾಗಿದೆ. ಅದರ ಸುರಕ್ಷತೆ ಅತೀ ಅಗತ್ಯೆ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಂಡಾಗ ಅದನ್ನು ನಿರ್ಲಕ್ಷಿಸದೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್, ಉಡುಪಿಯ ರಿಯಾಝ್ ಕುಕ್ಕಿಕಟ್ಟೆ ಮಾತನಾಡಿದರು.

ಈ ಸಂದರ್ಭದಲ್ಲಿ ನೇತ್ರ ತಜ್ಞರಾದ ಡಾ.ರೂಪ ಶ್ರೀ ರಾವ್, ಸಾಲಿಡಾರಿಟಿ ಯೂತ್’ಮೂವ್ಮೆಂಟ್, ಜಿಲ್ಲಾಧ್ಯಕ್ಷರಾದ ನಬೀಲ್ ಗುಜ್ಜರ್’ಬೆಟ್ಟು, ಮಸೀದಿಯ ಅಧ್ಯಕ್ಷರಾದ ಯುಸೂಫ್ ಖಾನ್, ಉಪಾಧ್ಯಕ್ಷರಾದ ಮಕ್ಸೂದ್, ಸಾಲಿಡಾರಿಟಿಯ ಪರ್ವೆಝ್ ಕುಕ್ಕಿಕಟ್ಟೆ, ಸಮಾಜ ಸೇವಕ ನಾಸಿರ್ ಕುಕ್ಕಿಕಟ್ಟೆ ಉಪಸ್ಥಿತರಿದ್ದರು. ಮಸೀದಿಯ ಉಪಾಧ್ಯಕ್ಷರಾದ ಮಕ್ಸೂದ್ ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ ನೂರಾರು ಫಲನುಭವಿಗಳು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.

Latest Indian news

Popular Stories