ಚಿಕ್ಕಮಗಳೂರು: ಮಗು ಅಪಹರಣ ಪ್ರಕರಣ ದಾಖಲು

ಕೊಬ್ಬರಿ ಎಣ್ಣೆ ಗಾಣದಲ್ಲಿ ಎಣ್ಣೆ ಬಿಡಿಸಲು ತಂದೆ ಮಗು ಬಂದಿದ್ದ ವೇಳೆ ಮಹಿಳೆಯೊಬ್ಬರು ಎರಡು ವರ್ಷದ ಮಗುವನ್ನು ಅಹರಿಸಿರುವ ಘಟನೆ ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ.

ಕಡೂರು ತಾಲೂಕು ಯಗಟಿ ಸಮೀಪದ ಸೀತಾಪುರ ಹಟ್ಟಿ ತಾಂಡ್ಯದ ರಘು ನಾಯಕ್ ಹಾಗೂ ಮಗಳು ಮಾನಸ ಕೊಬ್ಬರಿ ಎಣ್ಣೆ ಬಿಡಿಸಲು ಕಡೂರು ಪಟ್ಟಣದ ಕೆಎಸ್ಆರ್ ಟಿಸಿ ಬಸ್ ನಿಲ್ದಾ ಣದ ಸಮೀಪದಲ್ಲಿರುವ ಕೊಬ್ಬರಿ ಎಣ್ಣೆ ಬಿಡಿಸುವ ಗಾಣಕ್ಕೆ ಬಂದಿದ್ದಾರೆ. ತಂದೆ ರಘು ನಾಯಕ್ ಗಾಣದ ಒಳಗೆ ಕೊಬ್ಬರಿ ಇಟ್ಟು ಬರಲು ತೆರಳಿದಾಗ ಮಹಿಳೆ ಎರಡು ವರ್ಷದ ಮಗುವನ್ನು ಅಪಹರಿಸಿದ್ದಾಳೆ.

ಈ ಮಹಿಳೆ ಪಕ್ಕದ ಬಟ್ಟೆ ಅಂಗಡಿಯಲ್ಲಿ ಶಾಪಿಂಗ್ ಮಾಡುವಂತೆ ನಾಟಕವಾಡಿ ಅಂಗಡಿಯಿಂದ ಹೊರ ಬಂದಿದ್ದಾಳೆ. ಮಾನಸ ರಘು ನಾಯಕ್ ನಿಲ್ಲಿಸಿದ ಬೈಕ್ ಮುಂದೆ ನಿಂತಿದ್ದು ಈ ವೇಳೆ ಮಗುವನ್ನು ಅಪಹರಿಸಿದ್ದಾಳೆ.
ಮಗು ಕಾಣಿಸದಿದ್ದಾಗ ಹುಡುಕಾಟ ನಡೆಸಿದ ತಂದೆ ರಘು ನಾಯಕ್ ಬಟ್ಟೆ ಅಂಗಡಿ ಮುಂದಿನ ಸಿಸಿ ಟಿವಿಯನ್ನು ಪರಿಶೀಲಿಸಿದಾಗ ಈ ವೇಳೆ ಮಹಿಳೆ ಮಗುವನ್ನು ಅಪಹರಿಸಿರುವ ದೃಶ್ಯ ಸೆರೆಯಾಗಿದೆ.

ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಗು ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Latest Indian news

Popular Stories