ಶಿವಮೊಗ್ಗದಲ್ಲಿ ಲಾರಿ-ಸ್ಕೂಟರ್ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೇ ಮಾವ, ಅಳಿಯ ಮೃತ್ಯು

ಶಿವಮೊಗ್ಗ : ಶಿವಮೊಗ್ಗದಲ್ಲಿ ಲಾರಿ ಒಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿ ಹೇಳುತ್ತಿದ್ದ ಮಾವ ಹಾಗೂ ಅಳಿಯ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗೌತಮ ಪುರದ ಬಳಿ ಆನಂದಪುರ ಎಂಬಲ್ಲಿ ನಡೆದಿದೆ.

ಹೌದು ಲಾರಿ ಡಿಕ್ಕಿಯಾಗಿ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಅಳಿಯ ಮಾವ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗೌತಮಪುರ ಎಂಬಲ್ಲಿ ಘಟನೆ ನಡೆದಿದೆ. ಅಪಘಾತದಲ್ಲಿ ಮಾವ ವಾಸಪ್ಪ (70) ಹಾಗೂ ಅಳಿಯ ಸತೀಶ್ (40) ಸಾವನಪ್ಪಿದ್ದಾರೆ. ಈ ಕುರಿತು ಆನಂದಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Latest Indian news

Popular Stories