ಮಂಗಳೂರು: ಲಾರಿ ಢಿಕ್ಕಿಯಾಗಿ ಬಿಬಿಎ ವಿದ್ಯಾರ್ಥಿ‌ ಮೃತ್ಯು

ಮಂಗಳೂರು: ಲಾರಿ ಬೈಕ್‌ಗೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಬಿಬಿಎ ವಿದ್ಯಾರ್ಥಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಕುಂಟಿಕಾನ ಫ್ಲೈ ಓವರ್‌ನಲ್ಲಿ ನಡೆದಿದೆ‌. ಘಟನೆಯಲ್ಲಿ ಮತ್ತೋರ್ವ ಬೈಕ್ ಸವಾರ ಗಾಯಗೊಂಡಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬಿ.ಸಿ.ರೋಡ್ ಮೆಲ್ಕಾರ್ ನಿವಾಸಿ, ಕೂಳೂರು ಯೆನೆಪೊಯ ಕಾಲೇಜಿನ ಬಿಬಿಎ ಎರಡನೇ ವರ್ಷದ ವಿದ್ಯಾರ್ಥಿ ಮುಹಮ್ಮದ್ ಜಾಸಿಂ (18) ಮೃತಪಟ್ಟ ಯುವಕ. ಶಾಹಿದ್ ಸುಲೇಮಾನ್(20) ಎಂಬ ಗಾಯಾಳು ವಿದ್ಯಾರ್ಥಿ.

ಶುಕ್ರವಾರ ಎಂದಿನಂತೆ ಕಾಲೇಜು ಮುಗಿಸಿಕೊಂಡು ಶಾಹಿದ್ ಸುಲೇಮಾನ್‌ ತಮ್ಮ ಸ್ನೇಹಿತ ಮುಹಮ್ಮದ್ ಜಾಸಿಂನೊಂದಿಗೆ ಬೈಕ್‌ನಲ್ಲಿ ಕೂಳೂರಿನಿಂದ ಕೆಪಿಟಿ ಕಡೆಗೆ ಸಂಚರಿಸುತ್ತಿದ್ದರು. ಸಂಜೆ 4ಗಂಟೆ ಸುಮಾರಿಗೆ ಕುಂಟಿಕಾನ ಪ್ಲೈಓವರ್ ಬಳಿ ಬರುತ್ತಿದಂತೆ ಅದೇ ಬದಿಯಲ್ಲಿ ಬರುತ್ತಿದ್ದ ಲಾರಿ ನಿರ್ಲಕ್ಷತನ ಮತ್ತು ಅಜಾಗರೂಕತೆಯಿಂದ ಬಂದು ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸಹಿತ ರಸ್ತೆಗೆ ಬಿದ್ದ ಮೊಹಮ್ಮದ್ ಜಾಸಿಂರವರಿಗೆ ತಲೆಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Latest Indian news

Popular Stories