ಪುತ್ತೂರು: ವಿಎಚ್‌ಪಿ ನೂತನ ಕಾರ್ಯಾಲಯದ ಶಿಲಾನ್ಯಾಸದ ವೇಳೆ ಪುತ್ತಿಲ ಪರಿವಾರ – ವಿಎಚ್‌ಪಿ ಕಾರ್ಯಕರ್ತರ ನಡುವೆ ಜಟಾಪಟಿ

ಶಾಸಕ ಅಶೋಕ್ ಕುಮರ್ ರೈ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸಮ್ಮುಖದಲ್ಲೇ ಘಟನೆ

ಪುತ್ತೂರು: ವಿಎಚ್‌ಪಿ ನೂತನ ಕಾರ್ಯಾಲಯದ ಶಿಲಾನ್ಯಾಸದ ವೇಳೆ ಪುತ್ತಿಲ ಪರಿವಾರ ಹಾಗೂ ವಿಎಚ್‌ಪಿ ಕಾರ್ಯಕರ್ತರು ಪರಸ್ಪರ ಕೈ-ಕೈ ಮಿಲಾಯಿಸಿದ ಘಟನೆ ನಡೆದಿದೆ.

ಅದೇ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮತ್ತು ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯ ಸಮ್ಮುಖದಲ್ಲೇ ಈ ಘಟನೆ ನಡೆದಿದೆ.

ವಿಎಚ್‌ಪಿಯ ನೂತನ ಕಾರ್ಯಾಲಯಕ್ಕೆ ಭೂಮಿಪೂಜೆ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಅರುಣ್ ಕುಮಾರ್ ಪುತ್ತಿಲ ಆಗಮಿಸಿದ್ದರು‌. ಇದರಿಂದ ಕೆರಳಿದ ವಿಎಚ್‌ಪಿ ಕಾರ್ಯಕರ್ತರು ಅವರು ಈ ಕಾರ್ಯಕ್ರಮಕ್ಕೆ ಆಗಮಿಸಬಾರದು ಎಂದು ತಡೆಯೊಡ್ಡಿದ್ದಾರೆ. ಈ ವೇಳೆ ಪುತ್ತಿಲ ಪರಿವಾರ ಮತ್ತು ವಿಎಚ್‌ಪಿ ಕಾರ್ಯಕರ್ತರ ನಡುವೆ ಹೊಯ್‌ಕೈ ನಡೆದು ವಿಎಚ್‌ಪಿ ನೂತನ ಜಿಲ್ಲಾ ಕಾರ್ಯಲಯದ ಭೂಮಿಪೂಜೆ ಅಕ್ಷರಶಃ ರಣಾಂಗಣವಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೊಡ್ಡಿ ಪಕ್ಷೇತರ ಅಭ್ಯರ್ಥಿಯಾಗಿ ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸಿದ್ದರು‌. ಈ ವೇಳೆ ಅರುಣ್ ಕುಮಾರ್ ಪುತ್ತಿಲ ಮತ್ತು ಅವರ ತಂಡ ಹಿಂದೂ ಸಂಘಟನೆ ಹಾಗೂ ಸಂಘ ಪರಿವಾರವನ್ನು ನಿಂದಿಸಿದ್ದರು. ಆದ್ದರಿಂದ ಅರುಣ್ ಕುಮಾರ್ ಪುತ್ತಿಲ ಮತ್ತು ಪರಿವಾರ ಯಾವುದೇ ಕಾರಣಕ್ಕೂ ವಿಎಚ್‌ಪಿ ಕಾರ್ಯಕ್ರಮಕ್ಕೆ ಬರಬಾರದು ಎಂದು ಹೇಳಿದ್ದರು. ಇದಾದ ಬಳಿಕ ಬಿಜೆಪಿ ಹಾಗೂ ಪುತ್ತಿಲ ಪರಿವಾರ ಬಿಕ್ಕಟ್ಟು ಶಮನಗೊಂಡಿತ್ತು. ಆದರೆ ವಿಎಚ್‌ಪಿ ನಡುವಿನ ವೈಮನಸ್ಸು ಹಾಗೆಯೇ ಉಳಿದಿತ್ತು. ವಿಎಚ್‌ಪಿ ನೂತನ ಕಾರ್ಯಾಲಯದ ಕಾರ್ಯಕ್ರಮದಲ್ಲಿ ಈ ಸಮರ ಉಲ್ಬಣಗೊಂಡಿದೆ.

Latest Indian news

Popular Stories