ಹಾಸನ: ಐಫೋನ್ ಆಸೆಗಾಗಿ ಕೊರಿಯರ್ ಬಾಯ್ ಬರ್ಬರ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಅರಸಿಕೆರೆ ನಗರದಲ್ಲಿ ನಡೆದಿದೆ.
ಕೊಲೆ ಮಾಡಿ ನಾಲ್ಕು ದಿನ ಶವದ ಜತೆ ಮನೆಯಲ್ಲೇ ಕ್ರೂರಿಗಳು ಇದ್ದರು. ಕೊಲೆ ಪ್ರಕರಣವನ್ನು ಅರಸಿಕೆರೆ ಪೊಲೀಸರು ಭೇಧಿಸಿದ್ದಾರೆ.
23 ವರ್ಷದ ಹೇಮಂತ್ ಕೊಲೆಯಾದ ಯುವಕ. 20 ವರ್ಷದ ಆರೋಪಿ ಹೇಮಂತ್ ದತ್ತ ಎಂಬಾತ ಕೊಲೆ ಮಾಡಿದ್ದಾನೆ. ಇದೀಗ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಅರಸಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಆರೋಪಿ ತನಿಖೆಯಿಂದ ಮತ್ತಷ್ಟು ವಿಚಾರ ಹೊರಗೆ ಬರಲಿದೆ.