ಕಾರವಾರ : ಶಿರೂರು ಲ್ಯಾಂಡ್ ಸ್ಲೈಡ್ ದುರಂತದಲ್ಲಿ ಕಣ್ಮರೆಯಾಗಿರುವ ಜಗನ್ನಾಥ ನಾಯ್ಕ ಪುತ್ರಿಗೆ
ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಗುತ್ತಿಗೆ ನಡೆಸುತ್ತಿರುವ ಬಿ.ಎಚ್.ಇ.ಎಲ್ ಕಂಪನಿಯಲ್ಲಿ ಉದ್ಯೋಗ ಕೊಡಿಸಿರುವುದಾಗಿ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಹೇಳಿದ್ದಾರೆ.
ಜಗನ್ನಾಥ ಅವರ ಕೊನೆಯ ಮಗಳು ಕೃತಿಕಾಗೆ
ಬಿ.ಎಚ್.ಇ.ಎಲ್ ಕಂಪನಿಯಲ್ಲಿ ಉದ್ಯೋಗ ಕಲ್ಪಿಸಿರುವುದಾಗಿ ಕೆಂದ್ರ ಸಚಿವ ಕುಮಾರಸ್ವಾಮಿ ತಿಳಿಸಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಜಗನ್ನಾಥ ಪುತ್ರಿ ಕೃತಿಕಾ ನಾಯ್ಕಗೆ ಉದ್ಯೋಗ ಅವಕಾಶ ಕೊಡಿಸುವ ಭರವಸೆಯನ್ನು ಸಚಿವ ಕುಮಾರಸ್ವಾಮಿ ಶಿರೂರಿಗೆ ಬಂದಾಗ ನೀಡಿದ್ದರು.
ಸ್ಥಳೀಯ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸಹ ಸಚಿವ ಕುಮಾರಸ್ವಾಮಿ ಮೇಲೆ ಒತ್ತಡ ಹಾಕಿದ್ದರು .ಈ ಪ್ರಯತ್ನದಿಂದ ಕೃತಿಕಾಳಿಗೆ ಉದ್ಯೋಗ ಸಿಕ್ಕಿದೆ.
ಶಿರೂರು ಗುಡ್ಡಕುಸಿತ ದುರಂತದಲ್ಲಿ ಇದುವರೆಗೂ ಜಗನ್ನಾಥ ಶವ ಪತ್ತೆಯಾಗಿಲ್ಲ.
ಒಂದು ವಾರದ ಹಿಂದೆ ಇನ್ನೋರ್ವ ಪುತ್ರಿ ಪಲ್ಲವಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಲ್ಲಿ ಉದ್ಯೋಗ ಕಲ್ಪಿಸಿದ್ದರು. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಈ ದಿಶೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
…..
VIDEO: