ಮಂಗಳೂರು: ಕುಸಿದು ಬಿದ್ದು ಮೀನು ವ್ಯಾಪಾರಿ ಮೃತ್ಯು

ಕಿನ್ನಿಗೋಳಿ: ಮೀನು ವ್ಯಾಪಾರಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯಲ್ಲಿ ಬುಧವಾರ(ಜು.24ರಂದು) ನಡೆದಿದೆ.

ಮೃತರನ್ನು‌ ಪಕ್ಷಿಕೆರೆ ನಿವಾಸಿ ಅಬ್ದುಲ್ ಖಾದರ್ (55) ಎಂದು ‌ಗುರುತಿಸಲಾಗಿದೆ.

ಮೃತ ಅಬ್ದುಲ್ ಖಾದರ್ ಕಿನ್ನಿಗೋಳಿ ಮಂಗಳೂರು ‌ಬಸ್ಸಿನಲ್ಲಿ ಏಜೆಂಟ್ ಆಗಿದ್ದರು. ಕೋವಿಡ್‌ ನಂತರ ಮೀನು ವ್ಯಾಪರ ಪ್ರಾರಂಭಿಸಿದ್ದರು. ಎಂದಿನಂತೆ ಮಲ್ಪೆಯಿಂದ ತನ್ನ ದ್ವಿಚಕ್ರವಾಹನದಲ್ಲಿ ಮೀನು ತಂದು ಪಕ್ಷಿಕೆರೆ ಹೊಸಕಾಡು ಸಮೀಪ ಮನೆಯವರಿಗೆ ಮೀನು ಕೊಡುವಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಖಾಸಗಿ ಅಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Latest Indian news

Popular Stories