ಮಂಗಳೂರು: ಬಸ್ನೊಳಗಡೆ ಪ್ರಯಾಣಿಕರು ಇದ್ದಾಗಲೇ ಖಾಸಗಿ ಬಸ್ಗಳ ಚಾಲಕ-ನಿರ್ವಾಹಕರು ಹೊಡೆದಾಡಿಕೊಂಡಿರುವ ಘಟನೆ ಮಂಗಳೂರಿನ ಕಂಕನಾಡಿ ಬಳಿ ನಡೆದಿದೆ.ಈ ಪೈಕಿ ಒಂದು ಬಸ್ನೊಳಗಿದ್ದ ಸಿಸಿಟಿವಿಯಲ್ಲಿ ಸೆರೆಯಾದ ವೀಡಿಯೋ ಇದೀಗ ವೈರಲ್ ಆಗಿದೆ.
ಓರ್ವ ಬಸ್ ಚಾಲಕನು ಉಗುಳಿದ್ದು, ಮತ್ತೊಂದು ಚಾಲಕನ ಮೇಲೆ ಬಿದ್ದಿದೆ ಎಂದು ಆರೋಪಿಸಿ ವಿಟ್ಲ-ಮಂಗಳೂರಿಗೆ ಬರುವ ಖಾಸಗಿ ಬಸ್ ಚಾಲಕ-ನಿರ್ವಾಹಕರ ನಡುವೆ ಹೊಡೆದಾಟ ನಡೆದಿದೆ. ಒಂದು ಬಸ್ಸಿನ ನಿರ್ವಾಹಕ ಮತ್ತೊಂದು ಬಸ್ನೊಳಗಡೆ ನುಗ್ಗಿ ಅದರ ಡ್ರೈವರ್ ಅನ್ನು ಎಳೆದುಹಾಕಿ ಹೊಡೆದಾಟ ನಡೆದಿದೆ.
ಈ ವೇಳೆ ಓರ್ವನು ಸ್ಕೂಡ್ರೈವರ್ನಲ್ಲಿ ಚುಚ್ಚಿ ಹಲ್ಲೆಗೆ ಯತ್ನ ನಡೆದಿದೆ. ಬಸ್ನೊಳಗಡೆ ಪ್ರಯಾಣಿಕರಿದ್ದಾಗಲೇ ಚಾಲಕ-ನಿರ್ವಾಹಕರು ರೌಡಿ ಕಾಳಗ ನಡೆಸಿದ್ದಾರೆ.
ಈ ಬಗ್ಗೆ ನಗರದ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.