ಹಿರಿಯಡ್ಕ: ಬೈಕ್’ಗೆ ಅಡ್ಡ ಬಂದ ನಾಯಿ : ಬಿದ್ದು ಸವಾರ ಮೃತ್ಯು

ಹಿರಿಯಡ್ಕ: ಬೈಕ್ ನಲ್ಲಿ ಹೋಗುತ್ತಿರುವಾಗ ಏಕಾಏಕಿ ನಾಯಿ ಅಡ್ಡ ಬಂದ ಪರಿಣಾಮ ಬೈಕ್ ಸವಾರ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಕಣಜಾರು ಎಂಬಲ್ಲಿ ವರದಿಯಾಗಿದೆ.

ಮೃತ ಮಂಜುನಾಥ್ (41 )ಇವರು ಕಣಜಾರು ಗ್ರಾಮದ ಸಾಗು ಎಂಬಲ್ಲಿ ಹಾದುಹೋಗಿರುವ  ಗುಡ್ಡೆ ಅಂಗಡಿ-ಕಣಜಾರು ರಸ್ತೆಯಲ್ಲಿ ಗುಡ್ಡೆಅಂಗಡಿಯಿಂದ ಕಣಜಾರು ಕಡೆಗೆ ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ಬರುತ್ತಿದ್ದಾಗ ಅವರ ಮೋಟಾರ್ ಸೈಕಲ್‌ಗೆ  ನಾಯಿಯೊಂದು ಅಡ್ಡಬಂದ ಕಾರಣ  ಅದನ್ನು ತಪ್ಪಿಸಲು ಹೋದಾಗ  ಮಂಜುನಾಥ್  ರವರು ಮೋಟಾರ್ ಸೈಕಲನ್ನು ನಿಯಂತ್ರಣ ಮಾಡಲಾಗದೇ ಮೋಟಾರ್ ಸೈಕಲ್ ರಸ್ತೆಯ ಬಲಬದಿಯ  ಚರಂಡಿಗೆ ಹೋಗಿ ಬಿದ್ದು ಮಂಜುನಾಥ್  ರವರ ತಲೆ ರಸ್ತೆ ಬದಿಯ ಮರಕ್ಕೆ ಮತ್ತು ಚರಂಡಿ ಬದಿಗೆ ಡಿಕ್ಕಿ ಹೊಡೆದು ತಲೆಗೆ ತೀವ್ರ ಸ್ವರೂಪದಲ್ಲಿ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 03/2024 ಕಲಂ: 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories