ಶಿರೂರು ಗುಡ್ಡ ಕುಸಿತ ಪ್ರಕರಣ: ರಾಡರ್ ಬಳಸಿ ಶವಗಳ ಶೋಧ ಕಾರ್ಯ

ಉ.ಕ: ಜಿಲ್ಲೆಯ ಶಿರೂರು ಬಳಿ ನಡೆದ ಗುಡ್ಡ ಕುಸಿತ ಪ್ರಕರಣದಲ್ಲಿ ಮಣ್ಣಿನಡೊಯಲ್ಲಿ ನಾಪತ್ತೆಯಾಗಿರುವ ಕೇರಳದ ಚಾಲಕ ಅರ್ಜುನ್ ಪತ್ತೆಗಾಗಿ ರಾಡರ್ ಬಳಸಲಾಗುತ್ತಿದೆ.

1001453987 Accident News, Featured Story, Uttara Kannada

NDRF ಸಿಬ್ಬಂದಿಗಳು ತೀವ್ರ ಶೋಧ‌ ನಡೆಸುತ್ತಿದ್ದು ಇಂದು ಮೃತದೇಹ ಪತ್ತೆಯಾಗುವ ಸಾಧ್ಯತೆ ಕಂಡು ಬರುತ್ತಿದೆ‌. ಮಂಗಳವಾರ ಮಣ್ಣು ಕುಸಿತದ ಘಟನೆ ನಡೆದಿತ್ತು. 7 ಶವ ಈಗಾಗಲೇ ಪತ್ತೆಯಾಗಿವೆ.

ಘಟನಾ ಸ್ಥಳಕ್ಕೆ ಉಸ್ತುವಾರಿ ಸಚಿವ ವೈದ್ಯ ಆಗಮಿಸಿ ಕಾರ್ಯಾಚರಣೆ ವೀಕ್ಷಿಸುತ್ತಿದ್ದಾರೆ. ಶಾಸಕ ಸತೀಶ್ ಸೈಲ್ ಉಪಸ್ಥಿತರಿದ್ದಾರೆ. ಕಾರ್ಯಾಚರಣೆ ಮಳೆಯಿಂದ ವಿಳಂಬವಾಗಿತ್ತು ಇಂದು ಚುರುಕಿನ ಕಾರ್ಯಾಚರಣೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

1001454208 Accident News, Featured Story, Uttara Kannada

Latest Indian news

Popular Stories